ಬಾಗಲಕೋಟೆ: ರಸ್ತೆ ಮಧ್ಯೆಯಿಂದ ಓಡಿ ಬರುವ ಯುವಕನೊಬ್ಬ ಪಲ್ಟಿ ಹೊಡೆದು ಉಕ್ಕಿ ಹರಿಯುವ ಘಟಪ್ರಭಾ ನದಿಗೆ ಹಾರುವ ವಿಡಿಯೊ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮುಧೋಳ-ಯಾದವಾಡ ನಡುವಿನ ಘಟಪ್ರಭಾ ಸೇತುವೆಯ ಮೇಲೆ ಯುವಕ ಈ ದುಸ್ಸಾಹಸ ಮಾಡಿದ್ದಾನೆ.
ನದಿಗೆ ಹಾರಿದ ಯುವಕನ ಸ್ಥಿತಿ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ನದಿಗೆ ಧುಮುಕಿದ ಯುವಕ ಮತ್ತು ಅದನ್ನು ವಿಡಿಯೊ ಮಾಡಿದವರ ಹುಡುಕಾಟದಲ್ಲಿ ಮುಧೋಳ ಪೊಲೀಸರು ತೊಡಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.