ADVERTISEMENT

ಗ್ಯಾರಂಟಿ ಯೋಜನೆ: ಎಚ್‌.ಡಿ. ದೇವೇಗೌಡ ಕಿಡಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 18:42 IST
Last Updated 6 ಫೆಬ್ರುವರಿ 2024, 18:42 IST
ಸಿದ್ದರಾಮಯ್ಯ ದುರಹಂಕಾರಿ: ಎಚ್‌.ಡಿ. ದೇವೇಗೌಡ ಕಿಡಿ
ಸಿದ್ದರಾಮಯ್ಯ ದುರಹಂಕಾರಿ: ಎಚ್‌.ಡಿ. ದೇವೇಗೌಡ ಕಿಡಿ   

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜೆಡಿಎಸ್‌ನ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಟೀಕಾಪ್ರಹಾರ ನಡೆಸಿದರು.

ರಾಜ್ಯಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ’ಗ್ಯಾರಂಟಿ ಯೋಜನೆ ಅನುತ್ಪಾದಕ. ಇದು ತಾತ್ಕಾಲಿಕ ಅನುಕೂಲ ಮಾಡಿಕೊಡಲಿದೆ‘ ಎಂದರು.

’ಗ್ಯಾರಂಟಿ ಯೋಜನೆಗಳಿಂದ ಜನರು ಎದುರಿಸುತ್ತಿರುವ ತೊಂದರೆಗಳು ಕುರಿತು ಮಾಧ್ಯಮಗಳು ವರದಿ ಪ್ರಕಟಿಸಿವೆ‘ ಎಂದರು.

ADVERTISEMENT

’ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಶೀಘ್ರ ಅನುಮೋದನೆ ನೀಡಬೇಕು. 30 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಣ್ಣ ಯೋಜನೆ ಇದಾಗಿದೆ. ಇದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗುವುದಿಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.