ADVERTISEMENT

ನನ್ನನ್ನು ಮುಗಿಸಲು ಬಂದವರೆಲ್ಲಾ ಮುಗಿದು ಹೋಗಿದ್ದಾರೆ: ದೇವೇಗೌಡ

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 8:57 IST
Last Updated 24 ಆಗಸ್ಟ್ 2019, 8:57 IST
   

ಹಾಸನ: ನನ್ನನ್ನು ಮುಗಿಸಲು ಬಂದವರೆಲ್ಲಾ ಮುಗಿದು ಹೋಗಿದ್ದಾರೆ.ಪಕ್ಷ ಕಟ್ಟಿ ನಡೆಸುತ್ತೇನೆ ಆ ಶಕ್ತಿ ನನಗಿದೆ ಎಂದುಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಇಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಸಿದ್ದರಾಮಯ್ಯ ಹೇಳಿಕೆಯನ್ನು ಜನತೆ ನಂಬಬೇಕಲ್ಲ. ನನಗೆ ಇನ್ನೂ ನೆನಪಿನ ಶಕ್ತಿ ಇದೆ. ನೋಡೋಣ ಜನರ ಮುಂದೆ ಹೋಗೋಣ ಎಂದಿದ್ದಾರೆ.

ನಾನೇ ಹೋರಾಟ ಮಾಡಬೇಕು.ಇಲ್ಲವಾದಲ್ಲಿ ಮಾಜಿ ಮುಖ್ಯಮಂತ್ರಿಕುಮಾರಸ್ವಾಮಿ ಹೋರಾಡಬೇಕು.ಈಗ ಇಬ್ಬರು ಕುಮಾರಸ್ವಾಮಿ ಇದ್ದಾರೆ.ನಿಖಿಲ್ ಕುಮಾರ್ ಸೋತಿದ್ದಾರೆ.ನಾನೂ ಸೋತಿದ್ದೇನೆ ಆದರೆ ಕುಳಿತಿದ್ದೇವಾ.?ಮುಂದಿನ ಚುನಾವಣೆಯಲ್ಲಿ ಜನರು ನಮ್ಮ ಪಕ್ಷಕ್ಕೆ ಸಂಪೂರ್ಣ ಸಹಕಾರ ಕೊಡುತ್ತಾರೆ ಎಂಬ ಭರವಸೆ ನನಗಿದೆ ಎಂದು ಹೇಳಿದರು.

ADVERTISEMENT

ಏನೇನು ನಡೆಯುತ್ತಿದೆ ಎಲ್ಲಾ ಗೊತ್ತಿದೆ. ನನಗೆ ಅಧಿಕಾರದ ಕಡೆ ಹೋಗಿದ್ದೇವಾ, ಜನರ ಬಳಿಯೇ ಇದ್ದೇವೆ. ಎಲ್ಲವನ್ನು ಸಮಯ ಬಂದಾಗ ಹೇಳುವೆ ನಾನು ದೇವರ ನಂಬಿದ್ದೇನೆ. ಆದ್ದರಿಂದಲೇ ಹೋರಾಟ ಮಾಡುತ್ತಿದ್ದೇನೆ.

ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಸ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಮುಂದೆ ಸಾಗೋಣಅಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಒಪ್ಪಿದರೆ ಮೈತ್ರಿ ಬಗ್ಗೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಶಾಸಕರು ಅನರ್ಹರಾಗಲು ಯಾರು ಕಾರಣ?ಬಿಜೆಪಿಯವರು ರಾಜೀನಾಮೆ ಕೊಡಿಸಿದ್ದಾರೆ ಅವರೇ ಕಾಪಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.