ಕೆ.ಆರ್.ಪೇಟೆ: ‘ಎಚ್.ಡಿ.ಕುಮಾರಸ್ವಾಮಿ ಅವರ ಕಣ್ಣೀರು ಪ್ರವಾಹದಂತೆ ಕೊಚ್ಚಿ ಹೋಗುತ್ತದೆ. ಒಬ್ಬ ವ್ಯಕ್ತಿಯನ್ನು ಒಮ್ಮೆ ಮೂರ್ಖನನ್ನಾಗಿ ಮಾಡಬಹುದು. ಆದರೆ, ಪ್ರತಿಸಲವೂ ಮಾಡಲು ಸಾಧ್ಯವಿಲ್ಲ. ಕಣ್ಣೀರು ಹಾಕುವುದು ದೇವೇಗೌಡ ಕುಟುಂಬದ ಹುಟ್ಟುಗುಣ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.
‘ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಅವರ ಆಪ್ತಮಿತ್ರ ಜಮೀರ್ ಅಹಮ್ಮದ್ ಹೇಳುವಂತೆ, ಅದು ವಿಕ್ಸ್ ಕಣ್ಣೀರು. ಜನರು ಪ್ರಜ್ಞಾವಂತರಾಗಿದ್ದಾರೆ. ಅದೆಲ್ಲಾ ಈಗ ನಡೆಯುವುದಿಲ್ಲ’ ಎಂದರು ಹೇಳಿದರು.
ಪಾಪ ಮಾಡಿದವರ ಶಾಪ ತಟ್ಟದು
ದೇವೇಂದ್ರ ಫಡಣವೀಸ್ ರಾಜೀನಾಮೆ ಬಗ್ಗೆ ಕುಮಾರಸ್ವಾಮಿ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, ‘ಇವರ ಮುಖ್ಯಮಂತ್ರಿ ಸ್ಥಾನವೂ ಹೋಯಿತು. ಅದು, ದೇವರು ಕೊಟ್ಟ ವರವೇ? ಪಾಪ ಮಾಡಿದವರು ಶಾಪ ಕೊಟ್ಟರೆ ಅದು ಯಾರಿಗೂ ತಟ್ಟುವುದಿಲ್ಲ. ಅವರಿಗೇ ಬೌನ್ಸ್ ಆಗುತ್ತದೆ’ ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.