ADVERTISEMENT

ಹೇಮಾವತಿ: ಶಾಸಕರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 19:14 IST
Last Updated 13 ಡಿಸೆಂಬರ್ 2018, 19:14 IST

ಬೆಳಗಾವಿ: ಹೇಮಾವತಿ ನದಿ ನೀರಿಗಾಗಿ ಹಾಸನ ಹಾಗೂ ತುಮಕೂರು ಭಾಗದ ಶಾಸಕರ ನಡುವೆ ವಿಧಾನಸಭೆ
ಯಲ್ಲಿ ಗುರುವಾರ ವಾಕ್ಸಮರ ನಡೆಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ, ’ಹೇಮಾವತಿ ಇವರಪ್ಪನ ಮನೆ ಆಸ್ತಿಯಾ‘ ಎಂದು ಪ್ರಶ್ನಿಸಿದರು.

‘ಹೇಮಾವತಿಯಿಂದ 4 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ತುಮಕೂರಿಗೆ ಬಿಡಲಾಗುತ್ತಿತ್ತು. ಆದರೆ, 15 ದಿನಗಳಿಂದ ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಈ ಹಾಸನದವರ ಜತೆ ಬದುಕಲು ಸಾಧ್ಯವಿಲ್ಲ. ನೀರಾವರಿ ಬಳಕೆದಾರರ ಸಮಿತಿ ಸಭೆಯಲ್ಲೂ ನಮ್ಮ ಜಿಲ್ಲೆಗೆ ನ್ಯಾಯ ದೊರಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಬಿಜೆಪಿ ಸದಸ್ಯರಾದ ನಾಗೇಶ್, ಜ್ಯೋತಿ ಗಣೇಶ್ ಧ್ವನಿಗೂಡಿಸಿದರು. ಮಧ್ಯಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಮಸ್ಯೆ ಬಗೆಹರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಮನವಿ ಮಾಡಿದರು. ಉಭಯ ಜಿಲ್ಲೆಯ ಶಾಸಕರ ಸಭೆ ಕರೆದು ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಶಿವಕುಮಾರ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.