ADVERTISEMENT

ತುಂಡು ಬಟ್ಟೆಗೆ ಶಿಕ್ಷಣ ನಿರಾಕರಿಸಬೇಡಿ, ಪರೀಕ್ಷೆಗೆ ಅವಕಾಶ ಕೊಡಿ: ಹೋರಾಟಗಾರ್ತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 15:44 IST
Last Updated 19 ಏಪ್ರಿಲ್ 2022, 15:44 IST
ಹಿಜಾಬ್ (ಸಾಂದರ್ಭಿಕ ಚಿತ್ರ)
ಹಿಜಾಬ್ (ಸಾಂದರ್ಭಿಕ ಚಿತ್ರ)   

ಉಡುಪಿ: ‘ತುಂಡು ಬಟ್ಟೆಯ (ಹಿಜಾಬ್‌) ಕಾರಣಕ್ಕೆ ನಮಗೆ ಶಿಕ್ಷಣ ನಿರಾಕರಿಸುವುದು ಸರಿಯೇ’ ಎಂದು ಹಿಜಾಬ್ ಹೋರಾಟಗಾರ್ತಿ ಅಲ್ಮಾಸ್‌ ಶಿಕ್ಷಣ ಸಚಿವ ನಾಗೇಶ್ ಅವರನ್ನು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಹೇಳಿರುವುದು, ದೀರ್ಘಕಾಲದಿಂದ ಪರೀಕ್ಷೆಗೆ ಮಾಡಿಕೊಂಡಿರುವ ತಯಾರಿ ವ್ಯರ್ಥವಾಗಲಿದೆ. ದಯವಿಟ್ಟು ನಮಗೆ ಅನ್ಯಾಯ ಮಾಡಬೇಡಿ, ಪರೀಕ್ಷೆ ಬರೆಯಲು ಅವಕಾಶ ಕೊಡಿ’ ಎಂದು ಅಲ್ಮಾಸ್ ಮನವಿಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.