ADVERTISEMENT

ಚೆನ್ನೈ ಬೀದಿಯಲ್ಲಿ ಹುಚ್ಚ ವೆಂಕಟ್‌ ಅಲೆದಾಟ!

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 14:16 IST
Last Updated 21 ಆಗಸ್ಟ್ 2019, 14:16 IST
‘ಹುಚ್ಚ’ ವೆಂಕಟ್‌
‘ಹುಚ್ಚ’ ವೆಂಕಟ್‌   

ಬೆಂಗಳೂರು: 'ನನ್ ಮಗಂದ್', 'ನನ್ ಎಕ್ಕಡ' ಬೈಗುಳಗಳಿಂದಲೇ ಪ್ರಚಾರಕ್ಕೆ ಬಂದಿದ್ದ ನಟ, ನಿರ್ದೇಶಕ ಹಾಗೂ ಯೂಟ್ಯೂಬ್‌ ಸ್ಟಾರ್‌ ಹುಚ್ಚ ವೆಂಕಟ್ ಈಗ ಸಂಕಟದಲ್ಲಿದ್ದಾರೆ. ಅವರು ಕೊಳಕು ಬಟ್ಟೆ ಧರಿಸಿ, ಬರಿಗಾಲಲ್ಲಿಚೆನ್ನೈನ ನಡು ಬೀದಿಯಲ್ಲಿ ಅಲೆದಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹುಚ್ಚ ವೆಂಕಟ್‌ಗೆಏನಾಯ್ತೆಂದು ಅವರ ಅಭಿಮಾನಿಗಳೂ ಆತಂಕಕ್ಕೆ ಒಳಗಾಗಿದ್ದಾರೆ.

ಭುವನ್ ಪೊನ್ನಣ್ಣ ಅಭಿನಯದ ‘ರಾಂಧವ’ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಕೆಲಸದ ನಿಮಿತ್ತ ಚೆನ್ನೈಗೆ ಹೋಗಿತ್ತು. ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಕಾರಿನಲ್ಲಿ ಹೋಗುತ್ತಿದ್ದಾಗ, ಹುಚ್ಚ ವೆಂಕಟ್ ರಸ್ತೆಯಲ್ಲಿ ಅಲೆಯುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿದೆ. ತಕ್ಷಣ ಕಾರಿನಿಂದಕೆಳಗಿಳಿದು ವೆಂಕಟ್ ಅವರನ್ನು ಮಾತನಾಡಿಸಲು ಹೋದಾಗ ಅವರು ಪ್ರತಿಕ್ರಿಯಿಸದೆ ಹೋದರಂತೆ.ಚೆನ್ನೈನ ವೊಡಾಪಳನಿಯಲ್ಲಿ ಹುಚ್ಚ ವೆಂಕಟ್ ಅಲೆದಾಡುತ್ತಿರುವ ವಿಡಿಯೋವನ್ನು ಚಿತ್ರ ತಂಡ ಸೆರೆ ಹಿಡಿದು ಭುವನ್ ಗೆ ಕಳುಹಿಸಿ ಕೊಟ್ಟಿದ್ದಾರೆ.

ವೆಂಕಟ್‌ ಅವರನ್ನು ರಕ್ಷಿಸಿ, ಮನೆಗೆ ಕರೆತರಲುಈ ಮಾಹಿತಿಯನ್ನು ಅವರಕುಟುಂಬದ ಸದಸ್ಯರಿಗೆ ತಲುಪಿಸುವ ಪ್ರಯತ್ನವನ್ನು ನಟ ಭುವನ್‌ ಪೊನ್ನಣ್ಣ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಮತ್ತು ಮಾಹಿತಿಯನ್ನು ಅವರ ಅಧಿಕೃತ ಇನ್‌ಸ್ಟಾಗ್ರಾಂನಲ್ಲೂ ಪೋಸ್ಟ್ ಮಾಡಿದ್ದಾರೆ.

ADVERTISEMENT

ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹುಚ್ಚ ವೆಂಕಟ್ ಸೇನೆ ಇದೆ. ನನಗೆ ಪಾಕಿಸ್ತಾನದಲ್ಲೂ ಅಭಿಮಾನಿ ಬಳಗವಿದೆ ಎಂದು ಹೇಳಿಕೊಳ್ಳುತ್ತಿದ್ದ ಹುಚ್ಚ ವೆಂಕಟ್ ಅವರ ಈ ಪರಿಸ್ಥಿತಿಗೆ ಕಾರಣವೇನು? ಅವರು ಚೆನ್ನೈಗೆ ಹೋಗಿದ್ದೇಕೆ? ಎನ್ನುವ ಪ್ರಶ್ನೆಗಳು ಚರ್ಚೆಯಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವೆಂಕಟ್‌ ಬಗ್ಗೆ ಮರುಕ ವ್ಯಕ್ತಪಡಿಸಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ವಿಡಿಯೋ ಲಿಂಕ್‌: @bhuvann_ponnannaa_official

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.