ADVERTISEMENT

ಕೊಚ್ಚಿನ್- ಮಂಗಳೂರು ಗೇಲ್ ಪೈಪ್‌ಲೈನ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 6:20 IST
Last Updated 5 ಜನವರಿ 2021, 6:20 IST
   

ಮಂಗಳೂರು: ಕೊಚ್ಚಿನ್ ಮಂಗಳೂರು ಗೇಲ್ ಪೈಪ್‌ಲೈನ್ ಕಾಮಗಾರಿಯ ಉದ್ಘಾಟನೆ ಕಾರ್ಯಕ್ರಮ ಆರಂಭವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮಹತ್ವಪೂರ್ಣ ಯೋಜನೆಯಿಂದ ಪರಿಸರ ಸ್ನೇಹಿ ಅನಿಲ ದೊರೆಯಲಿದ್ದು, ಕೈಗಾರಿಕೆಗಳು, ಗೃಹಬಳಕೆಗೆ ಅಗ್ಗದ ದರದಲ್ಲಿ ಇಂಧನ ದೊರೆಯಲಿದೆ. ಇದರಿಂದ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಕೇರಳ ಮುಖ್ಯಮಂತ್ರಿ‌ ಪಿಣರಾಯಿ ವಿಜಯನ್ ಮಾತನಾಡಿ, ಅನೇಕ ಸವಾಲುಗಳ ಮಧ್ಯೆ ಪೈಪ್‌ಲೈನ್ ಕಾಮಗಾರಿ ಉದ್ಘಾಟನೆ ಆಗಿದೆ. ಕೊಯಮತ್ತೂರುವರೆಗಿನ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣವಾಗಲಿದೆ ಎಂದರು.

ADVERTISEMENT

ಮಂಗಳೂರು- ಕೊಚ್ಚಿನ್ ಗೇಲ್ ಪೈಪ್ ಲೈನ್ ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಲಿದ್ದು, ನೇರಪ್ರಸಾರದ ಲಿಂಕ್-https://pmindiawebcast.nic.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.