ADVERTISEMENT

ಉದ್ಯೋಗ ಸೃಷ್ಟಿಗಲ್ಲ, ಕೌಶಲ ತರಬೇತಿಗೆ ಒತ್ತು: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 19:24 IST
Last Updated 13 ಸೆಪ್ಟೆಂಬರ್ 2021, 19:24 IST
   

ಬೆಂಗಳೂರು: ‘ಉದ್ಯೋಗ ಸೃಷ್ಟಿಗಿಂತಲೂ, ಬೇಡಿಕೆ ಆಧಾರಿತ ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗು ತ್ತಿದೆ’ ಎಂದು ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಕೇಳಿದ ಪ್ರಶ್ನೆಗೆ ಅವರು, ‘ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ನಿರೀಕ್ಷೆಯಂತೆ ಕೌಶಲ ತರಬೇತಿ ನೀಡಲು ಸಾಧ್ಯ ಆಗಿಲ್ಲ. ಜೊತೆಗೆ, ಆರ್ಥಿಕ ಚಟುವಟಿಕೆಯೂ ಕುಂಠಿತಗೊಂಡಿದೆ’ ಎಂದರು.

‘ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳ ಪ್ರಕಾರ ಉದ್ಯೋಗ ಸೃಷ್ಟಿಯ ಶೇಕಡಾವಾರು ಪ್ರಮಾಣದಲ್ಲಿ ಬೆಂಗಳೂರಿಗಿಂತ ಪುಣೆ ಮತ್ತು ಹೈದರಾಬಾದ್‌ ಬಹಳ ಮುಂದಿದೆ. ಶೇ 4ರಷ್ಟು ಮಂದಿ ಮಾತ್ರ ಬೆಂಗಳೂರಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಉದ್ಯೋಗ ಸೃಷ್ಟಿ ವಿಷಯದಲ್ಲಿ ಬೆಂಗ ಳೂರು ನಗರ ಹಿಂದುಳಿದಿದೆ’ ಎಂದರು.

ADVERTISEMENT

‘ಉದ್ಯೋಗ ಸೃಷ್ಟಿಗೆ ಸರ್ಕಾರ ಆಸಕ್ತಿ ವಹಿಸದೇ ಇದ್ದರೆ, ಕೌಶಲ ತರಬೇತಿ ನೀಡುವ ಅಗತ್ಯವಾದರೂ ಏನು’ ಎಂದು ಹರಿಪ್ರಸಾದ್‌ ಪ್ರಶ್ನಿಸಿದರು.

‘ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ ಮೂಲಕ ತರಬೇತಿ ಮತ್ತು ನೇಮಕಾತಿ ನಡುವಿನ ಅಂತರ ಕಡಿಮೆ ಮಾಡಲಾಗುವುದು. ಆ ಮೂಲಕ, ನೇಮಕಾತಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು’ ಎಂದರು.

‘ಇಲಾಖೆಯ ಮೂಲಕ 492 ಉದ್ಯೋಗ ಮೇಳಗಳ ಮೂಲಕ 65,583 ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ’ ಎಂದೂ ಸಚಿವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.