ADVERTISEMENT

ಪೊರಕೆ ಸುತ್ತಲು ಕನ್ನಡ ಬಾವುಟ ಬಳಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 20:15 IST
Last Updated 13 ಅಕ್ಟೋಬರ್ 2018, 20:15 IST
ಬೇಲೂರು ಪುರಸಭೆ ಆವರಣದಲ್ಲಿ ಕನ್ನಡ ಬಾವುಟದಲ್ಲಿ ಪೊರಕೆಯನ್ನು ಸುತ್ತಿಟ್ಟಿರುವುದು
ಬೇಲೂರು ಪುರಸಭೆ ಆವರಣದಲ್ಲಿ ಕನ್ನಡ ಬಾವುಟದಲ್ಲಿ ಪೊರಕೆಯನ್ನು ಸುತ್ತಿಟ್ಟಿರುವುದು   

ಬೇಲೂರು: ಪುರಸಭೆ ಆವರಣದಲ್ಲಿ ಪೊರಕೆಗಳನ್ನು ಕನ್ನಡ ಬಾವುಟದಲ್ಲಿ ಸುತ್ತಿಟ್ಟಿದ್ದು ಕಂಡು ಬಂದಿದೆ.

‘ಪುರಸಭೆ ಎದುರು ಪೊರಕೆಯನ್ನು ಕನ್ನಡ ಬಾವುಟದಲ್ಲಿ ಸುತ್ತಿಡಲಾಗಿತ್ತು. ಇದರಿಂದ ಕನ್ನಡ ಧ್ವಜಕ್ಕೆ ಅಪಮಾನವಾಗಿದೆ. ಪುರಸಭೆ ಅಧ್ಯಕ್ಷೆ ಡಿ.ಆರ್‌.ಭಾರತಿ, ಮುಖ್ಯಾಧಿಕಾರಿ ಎಸ್‌.ಎಸ್‌.ಮಂಜುನಾಥ್‌ ಕ್ಷಮೆಯಾಚಿಸಬೇಕು. ಹೀಗೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬೋಜೇಗೌಡ ಒತ್ತಾಯಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಚ್‌.ಎಂ.ದಯಾನಂದ್‌ ಎಚ್ಚರಿಸಿದ್ದಾರೆ.

ADVERTISEMENT

ತಪ್ಪೊಪ್ಪಿಕೊಂಡ ನೌಕರ: ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪುರಸಭೆ ಮುಖ್ಯಾಧಿಕಾರಿ ಎಸ್‌.ಎಸ್‌.ಮಂಜುನಾಥ್‌, ‘ಪೊಲೀಸರಿಗೆ ದೂರು ನೀಡಲಾ
ಗಿದೆ. ಹೊರಗುತ್ತಿಗೆ ನೌಕರ ಪ್ರಕಾಶ್‌ ಈ ಕೆಲಸ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.