ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿಮಹೇಶ ಜೋಶಿ ಅವರು ಭಾರಿ ಮುನ್ನಡೆ ಸಾಧಿಸಿದ್ದಾರೆ. ತಮ್ಮ ಹತ್ತಿರದ ಸ್ಪರ್ಧಿ ಶೇಖರಗೌಡ ಮಾಲಿ ಪಾಟೀಲ ಅವರಿಗಿಂತ ಮೂರು ಪಟ್ಟು ಹೆಚ್ಚು ಮತಗಳನ್ನು ಪಡೆದಿದ್ದಾರೆ.
3.05 ಲಕ್ಷ ಮತದಾರರ ಪೈಕಿ 1.59 ಲಕ್ಷ ಮಂದಿ ಹಕ್ಕುಚಲಾಯಿಸಿದ್ದರು. ಚಲಾವಣೆಯಾಗಿದ್ದ ಒಟ್ಟಾರೆ ಶೇ 52.09 ಮತಗಳಲ್ಲಿ ಜೋಶಿ ಅವರೇ ಶೇ 43ರಷ್ಟು ಮತಗಳನ್ನು ಸೆಳೆದುಕೊಂಡಿದ್ದಾರೆ.
ಜೋಶಿ ಅವರಿಗೆ 68,525 ಮತಗಳು ಲಭಿಸಿದ್ದು, ಶೇಖರಗೌಡ ಅವರು22,357 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದೇ 24 ರಂದು ಪರಿಷತ್ತಿನ ಚುನಾವಣಾಧಿಕಾರಿಯ ಕೇಂದ್ರ ಕಚೇರಿಯಲ್ಲಿ ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ. ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗೆ ಎಲ್ಲಾ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಢೀಕರಿಸಿ, ಅದೇ ದಿನ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಜೋಶಿ ಅವರು ಬಿಜೆಪಿ ಹಾಗೂ ಆರ್ಎಸ್ಎಸ್ನ ಬಾಹ್ಯ ಬೆಂಬಲ ಪಡೆದಿದ್ದರು. ಬಿಜೆಪಿ ಸಂಸದರು, ಶಾಸಕರು ಅವರ ಪರ ಪ್ರಚಾರವನ್ನೂ ನಡೆಸಿದ್ದರು.
ಅಭ್ಯರ್ಥಿ;ಪಡೆದ ಮತಗಳು
ಮಹೇಶ ಜೋಶಿ;68,525
ಶೇಖರಗೌಡ ಮಾಲಿ ಪಾಟೀಲ;22,357
ವ.ಚ.ಚನ್ನೇಗೌಡ;16,755
ಸಿ.ಕೆ.ರಾಮೇಗೌಡ;14,110
ಮಾಯಣ್ಣ;8,791
ಸರಸ್ವತಿ ಚಿಮ್ಮಲಗಿ;6,471
ರಾಜಶೇಖರ ಮುಲಾಲಿ;5,209
ಶಿವರಾಜ ಗುರುಶಾಂತಪ್ಪ ಪಾಟೀಲ;1,768
ಶಿವರುದ್ರಯ್ಯ ಸ್ವಾಮಿ;1,759
ಸಂಗಮೇಶ ಬಾದವಾಡಗಿ;1,715
ಮ.ಚಿ.ಕೃಷ್ಣ;1,652
ಬಸವರಾಜ ಶಿ.ಹಳ್ಳೂರ;1,409
ಪ್ರಮೋದ ಹಳಕಟ್ಟಿ;1,233
ವಾಲ್ಮೀಕಪ್ಪ ಹ.ಯಕ್ಕರನಾಳ;1,017
ಸುಧೀಂದ್ರರಾವ್;808
ವೈ.ರೇಣುಕ;578
ಬಾಡದ ಭದ್ರಿನಾಥ;574
ಶರಣಬಸಪ್ಪ ಕಲ್ಲಪ್ಪ ದಾನಕೈ;558
ಕೆ.ರತ್ನಾಕರ ಶೆಟ್ಟಿ;477
ಶಿವಪ್ಪ ಮಲ್ಲಪ್ಪ ಬಾಗಲ;476
ಕೆ.ರವಿ ಅಂಬೇಕರೆ;440
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.