ADVERTISEMENT

ವೆಂಕಟೇಶಮೂರ್ತಿಗೆ ‘ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 3:46 IST
Last Updated 28 ಸೆಪ್ಟೆಂಬರ್ 2022, 3:46 IST
ಎಚ್‌.ಎಸ್.ವೆಂಕಟೇಶಮೂರ್ತಿ
ಎಚ್‌.ಎಸ್.ವೆಂಕಟೇಶಮೂರ್ತಿ   

ಬೆಂಗಳೂರು: ಮೈಕೊ ಕನ್ನಡ ಬಳಗದ ವತಿಯಿಂದ ನೀಡಲಾಗುವ ‘ರಾಬರ್ಟ್‌ ಬಾಷ್‌ ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’ಗೆ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ₹1 ಲಕ್ಷ ನಗದು ಒಳ ಗೊಂಡಿದೆ. ಅಕ್ಟೋಬರ್‌ 2ರಂದು ಆನಂದ ರಾವ್ ವೃತ್ತದಲ್ಲಿರುವ ಜಗ ದ್ಗುರುರೇಣುಕಾಚಾರ್ಯ ಕಾಲೇಜಿನ ಎಸ್.ಜೆ.ಆರ್.ಸಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಾಷ್ ವಾಣಿಜ್ಯ ಅಧಿಕಾರಿಗಳಾದ ಎಚ್.ಬಿ. ತೋಂಟೇಶ್, ಕಾರ್ಮಿಕ ಸಂಘದ ಅಧ್ಯಕ್ಷ ವಿ.ಜೆ.ಕೆ. ನಾಯರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.