ADVERTISEMENT

ಕುರ್ಚಿಗಾಗಿ ಯಡಿಯೂರಪ್ಪ ಹೋರಾಟ, ಕಂಗೆಟ್ಟ ರೈತರು: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 8:38 IST
Last Updated 18 ಜುಲೈ 2021, 8:38 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದ್ದು, ರೈತರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರ್ಚಿಗಾಗಿ ಹೋರಾಡುತ್ತಿದ್ದಾರೆ. ಅತ್ತ ಭಾರಿ ಮಳೆಯಿಂದಾಗಿ ಬೆಳೆ ನಾಶವಾಗಿ ರೈತರು ಕಂಗೆಟ್ಟಿದ್ದಾರೆ ಎಂದು ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿದ್ದು, 'ಭಾರಿ ಮಳೆಯಿಂದ ಬೆಳೆ ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಈಗಾಗಲೇ ಪ್ರವಾಹ ಮತ್ತು ಲಾಕ್‌ಡೌನ್‌ ನಷ್ಟದಿಂದ ಕಂಗಾಲಾದ ರೈತರಿಗೆ ಧೈರ್ಯ ತುಂಬುವ ಯೋಜನೆಯನ್ನು ರೂಪಿಸಿಲ್ಲ ಸರ್ಕಾರ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರ್ಚಿಗಾಗಿ ಹೋರಾಡುತ್ತಿದ್ದಾರೆ. ಕೃಷಿ ಸಚಿವ ಬಿ.ಎಸ್. ಪಾಟೀಲ್ ನಾಪತ್ತೆಯಾಗಿದ್ದಾರೆ! ರೈತರನ್ನ ಕೇಳುವವರಾರು?' ಎಂದು ಪ್ರಶ್ನಿಸಿದೆ.

ಈ ಮೊದಲು ಬಿ.ಎಸ್. ಯಡಿಯೂರಪ್ಪ ಅವರದೆಹಲಿ ಭೇಟಿಯನ್ನು ಕಾಂಗ್ರೆಸ್ಟೀಕೆಗೈದಿತ್ತು.

ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಲಸಿಕೆ ಕೊರತೆ ನೀಗಿಸಲು ತೆರಳಿದ್ದಾರೆಯೇ? ರಾಜ್ಯಕ್ಕೆ ಬರಬೇಕಿದ್ದ GST ಕೇಳಲು ಹೋಗಿದ್ದಾ? ನೆರೆ ಪರಿಹಾರದ ಬಾಕಿ ಕೇಳಲು ಹೋಗಿದ್ದೇ? 3ನೇ ಅಲೆ ಎದುರಿಸಲು ನೆರವಿನ ಪ್ಯಾಕೇಜ್ ತರಲು ಹೋಗಿದ್ದಾರೆಯೇ? ಅಥವಾ ಸಿಎಂ ಕುರ್ಚಿ ಭದ್ರಪಡಿಸಲು ಹೋಗಿದ್ದಾರೆಯೇ ಎಂದು ಟೀಕಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.