ರಾಮನಗರ: ಜಿಲ್ಲೆಯ ಮಾಗಡಿ ಹಾಗು ಚನ್ನಪಟ್ಟಣ ತಾಲ್ಲೂಕುಗಳ 62 ಗ್ರಾ.ಪಂ.ಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ 88.26ರಷ್ಟು ಮತದಾನ ನಡೆದಿದೆ.
ಚನ್ನಪಟ್ಟಣ ತಾಲ್ಲೂಕಿನಲ್ಲಿ 89.99 ಮಂದಿ ಮತ ಚಲಾಯಿಸಿದರೆ, ಮಾಗಡಿ ತಾಲ್ಲೂಕಿನಲ್ಲಿ ಶೇ 86.54 ಮತದಾರರು ಮತದಾನ ಮಾಡಿದ್ದಾರೆ.
ಕೊಪ್ಪಳ: ಜಿಲ್ಲೆಯ ಕುಷ್ಟಗಿ, ಗಂಗಾವತಿ, ಕಾರಟಗಿ, ಕನಕಗರಿ ತಾಲ್ಲೂಕುಗಳಲ್ಲಿ ಸಂಜೆ 5ಕ್ಕೆ ಕೊನೆಗೊಂಡ ಮತದಾನದಲ್ಲಿ ಶೇ 81.99ರಷ್ಟು ಮತದಾನವಾಗಿದೆ.
ಯಾವುದೇ ಕೋವಿಡ್ ರೋಗಿಗಳು ಮತ ಚಲಾಯಿಸಿಲ್ಲ. ಬಹುತೇಕ ಸುಗಮ, ಶಾಂತಿಯುತ ಚುನಾವಣೆ ನಡೆಯಿತು.
ತಾಲ್ಲೂಕು ಪಂಚಾಯಿತಿ ಮತದಾನ ವಿವರ (ಶೇ)
ಕುಷ್ಟಗಿ 36 81.05
ಗಂಗಾವತಿ 18 81.82
ಕಾರಟಗಿ 11 81.65
ಕನಕಗಿರಿ 11 86.8
ಒಟ್ಟು 76 81.99
ರಾಯಚೂರು: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆವರೆಗೂ ಶೇ 77.11 ರಷ್ಟು ಮತಗಳು ಚಲಾವಣೆ ಆಗಿವೆ.ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ 76.82, ಸಿಂಧನೂರು ತಾಲ್ಲೂಕಿನಲ್ಲಿ ಶೇ 78.62 ಹಾಗೂ ಮಸ್ಕಿ ತಾಲ್ಲೂಕಿನಲ್ಲಿ ಶೇ 74.61 ರಷ್ಟು ಮತದಾನವಾಗಿದೆ
ಚಿತ್ರದುರ್ಗ: ಮತಚಲಾಯಿಸಿದ ಬಳಿಕ ನಿತ್ರಾಣಗೊಂಡ ವೃದ್ಧೆಯೊಬ್ಬರು ಮತಗಟ್ಟೆ ಹೊರಗೆ ಮೃತಪಟ್ಟ ಘಟನೆ ಹಿರಿಯೂರು ತಾಲ್ಲೂಕಿನ ಬಿರೇನಹಳ್ಳಿಯಲ್ಲಿಯಲ್ಲಿ ಭಾನುವಾರ ನಡೆದಿದೆ.
ಶಿವಪುರದ ಸರೋಜಮ್ಮ (90) ಮೃತಪಟ್ಟವರು. ಬಿರೇನಹಳ್ಳಿ ಮತಗಟ್ಟೆಗೆ ಬಂದಿದ್ದ ಅವರು ಹಕ್ಕು ಚಲಾವಣೆ ಮಾಡಿದ ಬಳಿಕ ಅಸ್ವಸ್ಥರಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡುವ ಮೊದಲೇ ಮೃತಪಟ್ಟರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದ 2ನೇ ವಾರ್ಡ್ನಲ್ಲಿ ಶ್ರೀಶೈಲ ಪೀಠ ಹಾಗೂ ಯಡೂರದ ಕಾಡಸಿದ್ದೇಶ್ಬರ ಮಠದ ಪೀಠಾಧಿಪತಿ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ ಚಲಾಯಿಸಿದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕರಗಾಂವ ಗ್ರಾಮದ ಮತಗಟ್ಟೆಗೆ ಕೆಲವರು ಚಕ್ಕಡಿಯಲ್ಲಿ ಬಂದು ಮತ ಚಲಾಯಿಸಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವೂರ ಬೂತ್ನಲ್ಲಿ ಕೋವಿಡ್ ಪಾಸಿಟಿವ್ ಮತದಾರರು ಪಿಪಿ ಕಿಟ್ ಧರಿಸಿ, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸಿದರು.
ಬಳ್ಳಾರಿ: ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ 64.32 ರಷ್ಟು ಮತದಾನವಾಗಿದೆ
ಬೆಳಗಾವಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3ರವರೆಗೆ ಶೇ 63.93ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಚಾಮರಾಜನಗರ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಜಿಲ್ಲೆಯಲ್ಲಿ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 67.49ರಷ್ಟು ಮತದಾನವಾಗಿದೆ.
ಯಳಂದೂರು ತಾಲ್ಲೂಕು -68.58%
ಕೊಳ್ಳೇಗಾಲ ತಾಲ್ಲೂಕು- 68.92%
ಹನೂರು- 67.49%
ಶೇ 67.49ರಷ್ಟು ಮತದಾನ
ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ ಮತಚಲಾಯಿಸಲು ಮತಗಟ್ಟೆಗೆ ತೆರಳುವಾಗ ನಿವೃತ್ತ ಶಿಕ್ಷಕ ಪುಟ್ಟಮರುಳಾರಾಧ್ಯ (62) ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತಿದ್ದರು. ಕುಟುಂಬ ಸದಸ್ಯರ ಸಹಕಾರದಲ್ಲಿ ಮತಗಟ್ಟೆಗೆ ತೆರಳುತ್ತಿದ್ದರು. ಮತಗಟ್ಟೆಯ ಗೇಟಿಗೆ ಬರುವಷ್ಟರಲ್ಲಿ ಕುಸಿದು ಬಿದ್ದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 2 ನೇ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಭಾನುವಾರ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆ ತನಕ ಶೇ 65.62 ಮತದಾನ ದಾಖಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 65.91 , ಪುತ್ತೂರು- ಶೇ 65.06, ಸುಳ್ಯ ಶೇ 65.09 ಮತ್ತು ಕಡಬ ಶೇ 66.15 ಮತದಾನ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ.60.65 ರಷ್ಟು ಮತದಾನವಾಗಿದೆ.
ಶಿರಸಿಯಲ್ಲಿ ಶೇ.58.47, ಸಿದ್ದಾಪುರದಲ್ಲಿ ಶೇ.60.76, ಯಲ್ಲಾಪುರದಲ್ಲಿ ಶೇ.60.23, ಮುಂಡಗೋಡದಲ್ಲಿ ಶೇ.63.42, ಹಳಿಯಾಳದಲ್ಲಿ ಶೇ.64.65 ಮತದಾನ.
ದಾವಣಗೆರೆ: ಎರಡನೇ ಹಂತದ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ರ ಹೊತ್ತಿಗೆ ಶೇ 63.72 ಮತದಾನವಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಶೇ 63.09 , ಹರಿಹರ ತಾಲ್ಲೂಕಿನಲ್ಲಿ ಶೇ 61.5, ನ್ಯಾಮತಿ ತಾಲ್ಲೂಕಿನಲ್ಲಿ ಶೇ 66.72 ಮತದಾನವಾಗಿದೆ.
ಮೂರು ತಾಲ್ಲೂಕುಗಳ 101 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ.
ದಾಂಡೇಲಿಯಲ್ಲಿ ಶೇ.57.75 ಹಾಗೂ ಜೋಯಿಡಾದಲ್ಲಿ ಶೇ.58.17 ಮತದಾನ ನಡೆದಿದೆ.
ಹಾವೇರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೇ ಹಂತದ 105 ಗ್ರಾ.ಪಂ ಚುನಾವಣೆ ಬೆಳಿಗ್ಗೆ 7 ಗಂಟೆಯಿಂದ 1 ಗಂಟೆಯವರೆಗೆ ಮತದಾನವಾದ ಅಂಕಿ ಅಂಶಗಳ ಮಾಹಿತಿ.ಶಿಗ್ಗಾಂವಿ : 47.81%
ಸವಣೂರು: 43.34%
ಹಾನಗಲ್ : 43.51%
ಬ್ಯಾಡಗಿ : 47.29%
ಒಟ್ಟು ಮತದಾನ - 45.09%
ಕಲಬುರ್ಗಿ: ಜಿಲ್ಲೆಯ ಯಡ್ರಾಮಿ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ ಹಾಗೂ ಸೇಡಂ ತಾಲ್ಲೂಕುಗಳಲ್ಲಿ ಭಾನುವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಮಧ್ಯಾಹ್ನದವರೆಗೆ ಶೇ. 43.43ರಷ್ಟು ಮತದಾನವಾಗಿದ್ದು, ಮಹಿಳೆಯರೇ ಹೆಚ್ಚಿನ ಉತ್ಸಾಹ ತೋರಿದ್ದಾರೆ.
ಪುರುಷರು 39.42 ಮತದಾನ ಮಾಡಿದ್ದರೆ ಮಹಿಳೆಯರ ಪ್ರಮಾಣ ಶೇ 47.53.
ಚಿಂಚೋಳಿ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ 427 ಸದಸ್ಯರ ಆಯ್ಕೆಗೆ ನಡೆಯುತ್ತಿರುವ ಮತದಾನದಲ್ಲಿ ಪುರುಷರನ್ನು ಹಿಂದಿಕ್ಕಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ತಾಲ್ಲೂಕಿನಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ಗಂಟೆಗೆ ಶೇ 42.12 ಮತದಾನ ನಡೆದಿದೆ. 132007ರಲ್ಲಿ ಪುರುಷರು 67613, ಸ್ತ್ರೀಯರು 64376 ಮತ್ತು ಇತರೆ 18 ಮತದಾರರಿದ್ದಾರೆ. ಇವರಲ್ಲಿ ಪುರುಷರು 25053 (ಶೇ 37.05), ಸ್ತ್ರೀಯರು 30553 (ಶೇ 47.46), ಮತ ಚಲಾಯಿಸುವ ಮೂಲಕ ಪುರುಷರಿಗಿಂತಲೂ ಸ್ತ್ರೀಯರು ಶೇ 5ರಷ್ಟು ಹೆಚ್ಚು ಮತದಾನ ಮಾಡಿದ್ದಾರೆ ಎಂದು ತಹಶೀಲ್ದಾರ್ ಅರುನಕುಮಾರ ಕುಲಕರ್ಣಿ 'ಪ್ರಜಾವಾಣಿ'ಗೆ ತಿಳಿಸಿದರು.
ಇನ್ನೊಂದೆಡೆ, ಯಡ್ರಾಮಿ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಮತ ಚಲಾಯಿಸಲು ಮಹಿಳೆಯರು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದ ಕನಿಷ್ಠ ಅಂತರ ಕಾಯ್ದುಕೊಳ್ಳಲು ಪೊಲೀಸರು ಪದೇ ಪದೇ ಸೂಚನೆ ನೀಡಿದರೂ ಪ್ರಯೋಜನವಾಗಲಿಲ್ಲ.
ಸೇಡಂ ತಾತಾಲೂಕಿನಲ್ಲಿ ಕೂಡ ಶೇ 38ರಷ್ಟು ಪುರುಷರು, ಶೇ 49ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದರು.
ಬೆಳಗಾವಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಮಧ್ಯಾಹ್ನ 1ರವರೆಗೆ ಶೇ 45.13ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಉಪ್ಪಿನಂಗಡಿ: ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯ ಹಿರ್ತಡ್ಕ ಶಾಲೆಯಲ್ಲಿ 6ನೆ ವಾರ್ಡ್ ನಲ್ಲಿ 106 ವರ್ಷದ ಬೊಮ್ಮಿ ಅವರು ತಮ್ಮ ಮೊಮ್ಮಗ ಕೇಶವ ಗೌಡರ ಸಹಾಯದಿಂದ ಮತ ಚಲಾಯಿಸಿ ಹೊರ ಬರುತ್ತಿರುವುದು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತದಾನ ಮಾಡಿದರು.
ದಾವಣಗೆರೆ: ಎರಡನೇ ಹಂತದ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ತಾಲ್ಲೂಕುಗಳಲ್ಲಿ ಮಧ್ಯಾಹ್ನ 1ರ ಹೊತ್ತಿಗೆ ಶೇ 44.06 ಮತದಾನವಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಶೇ 44.06 , ಹರಿಹರ ತಾಲ್ಲೂಕಿನಲ್ಲಿ ಶೇ 42.60, ನ್ಯಾಮತಿ ತಾಲ್ಲೂಕಿನಲ್ಲಿ ಶೇ 41.20 ಮತದಾನವಾಗಿದೆ.
ಮೂರು ತಾಲ್ಲೂಕುಗಳ 101 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 2 ನೇ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಭಾನುವಾರ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆ ತನಕ ಶೇ 52.64 ಮತದಾನ ದಾಖಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 53.35 , ಪುತ್ತೂರು- ಶೇ 52.85, ಸುಳ್ಯ ಶೇ 51.37 ಮತ್ತು ಕಡಬ ಶೇ 52.07 ಮತದಾನ ನಡೆದಿದೆ
ಕೊಪ್ಪಳ: ಎರಡನೇಯ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಕನಕಗಿರಿ ತಾಲ್ಲೂಕಿನ ಭಾನುವಾರ ಬಿರುಸಿನಿಂದ ನಡೆದಿದೆ.
ಕಲಕೇರಿ, ಆದಾಪುರ, ಯತ್ನಟ್ಟಿ ವಡಕಿ,ನವಲಿ ಸೇರಿದಂತೆ ಅನೇಕ ಮತದಾನ ಕೇಂದ್ರಗಳಲ್ಲಿ ಕೋವಿಡ್-19 ನಿಯಮಗಳನ್ನು ಪಾಲಿಸಿಕೊಂಡು ಬಂದಿರುವುದು ಕಂಡು ಬಂತು.
ಮತ ಚಲಾಯಿಸಲು ಮತದಾರರು ಬಹಳ ಉತ್ಸುಕರಾಗಿದ್ದು ಮಾಸ್ಕ್ ಧರಿಸಿಕೊಂಡು ಮತದಾನದ ಕೇಂದ್ರದ ಕಡೆಗೆ ಧಾವಿಸಿದರು.
ಆರೋಗ್ಯ ಇಲಾಖೆಯವರು ಮತದಾನ ಕೇಂದ್ರದ ಮುಂದೆ ಮತದಾರರ ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ಮಾಡಿ ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟರು.
ಬಹುತೇಕ ಮತದಾನ ಕೇಂದ್ರದಲ್ಲಿ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಸಾಲಾಗಿ ನಿಂತು ಮತ ಚಲಾಯಿಸಿದರು.
ರಾಷ್ಟ್ರೀಯ ಪಕ್ಷದ ಕಾರ್ಯಕರ್ತರು ತಮ್ಮ ಕೊರಳಲ್ಲಿ ಕೇಸರಿ ಶಾಲ್ ಹಾಕಿಕೊಂಡು ಗಮನ ಸೆಳೆದರು.
ಉಡುಪಿ, ಬೆಂಗಳೂರು, ಯಾದಗಿರಿ ಸೇರಿ ನಗರ ಪ್ರದೇಶಕ್ಲೆ ಉದ್ಯೋಗ ಅರಸಿ ಗುಳೆ ಹೋಗಿದ್ದ ನೂರಾರು ಕೂಲಿಕಾರರು ತಮ್ಮಹಕ್ಕುಚಲಾಯಿಸಲು ಡಿಲಕ್ಸ್ ಬಸ್ ಬಾಡಿಗೆ ಪಡೆದುಕೊಂಡು ತಮ್ಮ ಊರು ಕಡೆಗೆ ದೌಡಯಿಸಿ ಬಂದರು. ಮತ ಚಲಾಯಿಸುವ ಮುಂಚೆ ದಾರಿಯಲ್ಲಿ ಬಸ್ ನಿಲ್ಲಿಸಿ
ಕೂಲಿಕಾರರಿಗೆ ನಗದು ಹಣ ಹಾಗೂ ತಮ್ಮ ಅಭ್ಯರ್ಥಿ ಮಾದರಿ ಮತ ಪತ್ರದ ಗುರುತಿನ ಚಿಹ್ನೆ ನೀಡಿದರು.
ಮತದಾನ ಮುಗಿದ ನಂತರ ಊಟ ಮಾಡಿಸಿ ಧನ್ಯವಾದ ಅರ್ಪಿಸಿ ಬೀಳ್ಕೊಡುಗೆ ನೀಡಿದರು.
ಚಾಮರಾಜನಗರ: ನಾಲ್ಕು ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮತದಾನದಿಂದ ದೂರ ಉಳಿದಿದ್ದ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ವಾರ್ಡ್ -1 ಗ್ರಾಮಸ್ಥರನ್ನು ಮನವೊಲಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಯಶಸ್ವಿಯಾಗಿದ್ದು. ಈಗ ಮತದಾನ ಆರಂಭವಾಗಿದೆ. ಮೂರು ಗಂಟೆ ಹೆಚ್ಚು ಕಾಲ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.45.05ರಷ್ಟು ಮತದಾನವಾಗಿದೆ. ಶಿರಸಿಯಲ್ಲಿ ಶೇ.43.3, ಸಿದ್ದಾಪುರದಲ್ಲಿ ಶೇ.47.95, ಯಲ್ಲಾಪುರದಲ್ಲಿ ಶೇ.48.48, ಮುಂಡಗೋಡದಲ್ಲಿ ಶೇ.43.75, ಹಳಿಯಾಳದಲ್ಲಿ ಶೇ.45.01, ದಾಂಡೇಲಿಯಲ್ಲಿ ಶೇ.41.83 ಹಾಗೂ ಜೋಯಿಡಾದಲ್ಲಿ ಶೇ.43.82 ಮತದಾನ ನಡೆದಿದೆ.
ರಾಯಚೂರು: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೂ ಶೇ 36.41 ರಷ್ಟು ಮತಗಳು ಚಲಾವಣೆ ಆಗಿವೆ.ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ 35.71, ಸಿಂಧನೂರು ತಾಲ್ಲೂಕಿನಲ್ಲಿ ಶೇ 34.76 ಹಾಗೂ ಮಸ್ಕಿ ತಾಲ್ಲೂಕಿನಲ್ಲಿ ಶೇ 40.82 ರಷ್ಟು ಮತದಾನವಾಗಿದೆ.
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಮಧುಗಿರಿ, ಶಿರಾ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ಮಧ್ಯಾಹ್ನ 1ರವರೆಗೆ ಶೇ 47.82 ಮತದಾನವಾಗಿದೆ.
ಶಿರಾ ತಾಲ್ಲೂಕಿನಲ್ಲಿ ಶೇ 48.99, ತುರುವೇಕೆರೆ ಶೇ 48.44, ಮಧುಗಿರಿ ಶೇ 47. 16, ಚಿಕ್ಕನಾಯಕನಹಳ್ಳಿ ಶೇ 48.57 ತಿಪಟೂರಿನಲ್ಲಿ ಶೇ 45.96ರಷ್ಟು ಮತದಾನವಾಗಿದೆ.
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಮಧುಗಿರಿ, ಶಿರಾ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ಮಧ್ಯಾಹ್ನ 1ರವರೆಗೆ ಶೇ 47.82 ಮತದಾನವಾಗಿದೆ.
ಶಿರಾ ತಾಲ್ಲೂಕಿನಲ್ಲಿ ಶೇ 48.99, ತುರುವೇಕೆರೆ ಶೇ 48.44, ಮಧುಗಿರಿ ಶೇ 47. 16, ಚಿಕ್ಕನಾಯಕನಹಳ್ಳಿ ಶೇ 48.57 ತಿಪಟೂರಿನಲ್ಲಿ ಶೇ 45.96ರಷ್ಟು ಮತದಾನವಾಗಿದೆ.
ಪುತ್ತೂರು: ತಾಲ್ಲೂಕಿನ ಸಂಟ್ಯಾರು ಶಾಲಾ ಮತಗಟ್ಟೆಯ ವಠಾರದಲ್ಲಿ ಅಭ್ಯರ್ಥಿಗಳ ಚಿಹ್ನೆಯ ಪತ್ರ ಹಂಚುತ್ತಿರುವುದು ಪತ್ತೆಯಾಗಿದೆ.
ಗ್ರಾಮ ಪಂಚಾಯತಿಗಳ ಚುನಾವಣೆ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ (ಚುನಾವಣಾಧಿಕಾರಿ) ಡಾ.ಯತೀಶ್ ಉಳ್ಳಾಲ್ ಅವರು ಮತಗಟ್ಟೆಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದಾಗ ಮತದಾರರೊಬ್ಬರ ಕೈಯಲ್ಲಿರುವ ಚೀಟಿಯನ್ನು ನೋಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಡಾ.ಯತೀಶ್ ಉಳ್ಳಾಲ್ ಅವರು ಬೂತ್ ನಲ್ಲಿ ಟೇಬಲ್ ಹಾಕಿ ಕೂತಿದ್ದವರನ್ನು ವಿಚಾರಿಸಿದಲ್ಲದೇ ಟೇಬಲ್ ಕೆಳಗೆ ಇದ್ದ ಅಭ್ಯರ್ಥಿಗಳ ಚಿಹ್ನೆ ಇದ್ದ ಚೀಟಿನ ಒಂದು ಕಟ್ಟನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸುವಂತೆ ಮತಗಟ್ಟೆಯ ಪರಿಶೀಲನಾಧಿಕಾರಿಗೆ ಸೂಚನೆ ನೀಡಿದ್ದಾರೆ.
ವಿಜಯಪುರ: ಜಿಲ್ಲೆಯಲ್ಲಿ ಮಧ್ಯಾಹ್ನ 1ರ ವರೆಗೆ ಗ್ರಾಮ ಪಂಚಾಯಿತಿ ಚಯನಾವಣೆಗೆ ಸಂಬಂಧಿಸಿದಂತೆ ಶೇ 34.53ರಷ್ಟು ಮತದಾನವಾಗಿದೆ.
ಇಂಡಿ ಶೇ 38.65
ಸಿಂದಗಿ ಶೇ 33.85
ದೇವರ ಹಿಪ್ಪರಗಿ ಶೇ 36.12
ಚಡಚಣ ಶೇ 29.50ರಷ್ಟು ಮತದಾನವಾಗಿದೆ.
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮತದಾನ ಮಾಡಿದರು.
ಸುಳ್ಯ: ತಾಲ್ಲೂಕಿನ ಮಂಡೆಕೋಲು ಗ್ರಾಮದ ಪೇರಾಲಿನಲ್ಲಿ ಮತಗಟ್ಟೆ ಹೊರಗಡೆ ಟೇಬಲ್ ಹಾಕುವ ವಿಚಾರದಲ್ಲಿ ಬಿಜೆಪಿ ಬೆಂಬಲಿತ ಮತ್ತು ಬಂಡಾಯ ಅಭ್ಯರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಚಿತ್ರದುರ್ಗ: ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೇ 20 ರಷ್ಟು ಮತದಾನವಾಗಿದೆ.
ಚಳ್ಳಕೆರೆ ತಾಲ್ಲೂಕಿನ ದಗ್ಗಾವರ ಗ್ರಾಮದ ಮತಗಟ್ಟೆ ಬಳಿ ಹಣ ಹಂಚಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಧುರೆ ಮತಗಟ್ಟೆಯಲ್ಲಿ ಶತಾಯುಷಿ ಮಹಿಳೆ ವಾಹನದಲ್ಲಿ ಮತ ಚಲಾಯಿಸಿದರು. ಮತಗಟ್ಟೆಗೆ ಬಂದಿದ್ದ ವೃದ್ದೆ ತೀರ ಅಸ್ವಸ್ಥರಾಗಿದ್ದರು. ಏಜೆಂಟರ ಒಪ್ಪಿಗೆ ಮೇರೆಗೆ ವಾಹನದಲ್ಲೇ ಕುಳಿತು ಮತ ಹಾಕಲು ಮತಗಟ್ಟೆ ಅಧಿಕಾರಿ ಅವಕಾಶ ಕಲ್ಪಿಸಿದರು.
ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪತ್ನಿ ಹೇಮಾವತಿ ಹೆಗ್ಗಡೆ ಮತ್ತು ಸಹೋದರ ಡಿ. ಹರ್ಷೇಂದ್ರಕುಮಾರ್ ಜೊತೆ ಬಂದು ಧರ್ಮಸ್ಥಳ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ ಭಾನುವಾರ ಮತ ಚಲಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ನಕ್ಸಲ್ ಪೀಡಿತ ಕುತ್ಲೂರು ಮತ್ತಿತರ ವ್ಯಾಪ್ತಿಯಲ್ಲಿ ಭಾನುವಾರ ಗ್ರಾಮ ಪಂಚಾಯಿತಿಗೆ ಬಿರುಸಿನಿಂದ ಮತದಾನ ನಡೆಯಿತು. ಕುತ್ಲೂರು ಶಾಲೆಯಲ್ಲಿ ಮತದಾನದ ದೃಶ್ಯ.
ಸುಳ್ಯ: ಕಲ್ಮಡ್ಕ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರನ್ನು ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಚುನಾವಣೆಯ ಮತದಾನದ ಹಿಂದಿನ ದಿನ (ಶನಿವಾರ) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಲಕಿ ಮನೆಯವರು ನೀಡಿದ ದೂರಿನ ಮೇರೆಗೆ ಶನಿವಾರ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧನ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಾಗಿದೆ ಎಂದು ಎಸ್ ಐ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.
ಹಾಸನ: ಜಿಲ್ಲೆಯ ನಾಲ್ಕು ತಾಲ್ಲೂಕಿನ 120 ಪಂಚಾಯಿತಿ ಗಳಿಗೆ ಬೆಳಿಗ್ಗೆ 11ಗಂಟೆ ಹೊತ್ತಿಗೆ ಶೇ 26.05 ಮತದಾನವಾಗಿದೆ.
ಅರಸೀಕೆರೆ ಶೇ 25.09, ಬೇಲೂರು 22.80, ಆಲೂರು 33.87, ಹೊಳೆನರಸೀಪುರ 27.59 ರಷ್ಟು ಮತದಾನವಾಗಿದೆ.
ಬೆಳಿಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ, ಮಧ್ಯಾಹ್ನ ಹೊತ್ತಿಗೆ ಬಿರುಸು ಪಡೆದುಕೊಂಡಿದೆ.
ಬಾಗಲಕೋಟೆ: ಗ್ರಾಮ ಪಂಚಾಯ್ತಿ ಚುನಾವಣೆ ಎರಡನೇ ಹಂತದ ಮತದಾನ ಜಿಲ್ಲೆಯಲ್ಲಿ ಚುರುಕುಗೊಂಡಿದೆ. ಗುಳೇ ಹೋದವರು ಮತ ಹಾಕಲು ಊರುಗಳಿಗೆ ಬರುತ್ತಿದ್ದು, ಗ್ರಾಮೀಣ ಪರಿಸರ ಮತ್ತೆ ಜೀವ ಪಡೆದಿದೆ.
ಹುಬ್ಬಳ್ಳಿ: ಗ್ರಾಮ ಪಂಚಾಯ್ತಿ ಸ್ಥಾನಮಾನಕ್ಕೆ ಆಗ್ರಹಿಸಿ, ಹುಬ್ಬಳ್ಳಿ ತಾಲ್ಲೂಕಿನ ಮಲ್ಲಿಗವಾಡ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದರು. ಹಿಂದಿನ ಗ್ರಾ.ಪಂ. ಚುನಾವಣೆಯನ್ನೂ ಇದೇ ಕಾರಣಕ್ಕಾಗಿ ಬಹಿಷ್ಕರಿಸಲಾಗಿತ್ತು.
ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮದ 1 ನೇ ವಾರ್ಡ್ ನಲ್ಲಿ ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದಾರೆ.
ವಾರ್ಡ್ ನಲ್ಲಿ ನಾಲ್ಕು ಸ್ಥಾನಗಳಿವೆ. ಆದರೆ ಎರಡು ಸಾಮಾನ್ಯ ಸ್ಥಾನಗಳಿಗೆ ಯಾರೂ ಸ್ಪರ್ಧಿಸಿಲ್ಲ. ಹೀಗಾಗಿ ಇನ್ನುಳಿದ ಎರಡು ಸ್ಥಾನಗಳಿಗೆ ಮಾತ್ರ ಮತ ಚಲಾಯಿಸುವಂತೆ ಚುನಾವಣಾ ಅಧಿಕಾರಿಗಳು ಸೂಚಿಸಿದರು. ಆದರೆ, ಇದಕ್ಕೆ ಒಪ್ಪದ ಗ್ರಾಮಸ್ಥರು ನಾಲ್ಕು ಮತಹಾಕಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಎರಡು ಸ್ಥಾನಗಳಿಗೆ 11 ಮಂದಿ ಸ್ಪರ್ಧಿಸಿದ್ದಾರೆ.
ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಸ್ಥಳಕ್ಕೆ ಭೇಟಿ ಮಾಡಿ ಅಭ್ಯರ್ಥಿಗಳು ಹಾಗೂ ಮತದಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಜನರು ಒಪ್ಪಲಿಲ್ಲ.
ಪರಿಹಾರಕ್ಕೆ ಆಗ್ರಹಿಸಿ ಬಹಿಷ್ಕಾರ: ಮಹದೇಶ್ವರ ಬೆಟ್ಟದ ಪಡಸಲನತ್ತ ಗ್ರಾಮದಲ್ಲೂ ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ.
ಗ್ರಾಮಸ್ಥರೊಬ್ಬರು ಕಾವೇರಿ ವನ್ಯಧಾಮದಲ್ಲಿ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಅರಣ್ಯಇಲಾಖೆ ತಕ್ಷಣವೇ ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಮಧುಗಿರಿ, ಶಿರಾ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೇ 23.55 ರಷ್ಟು ಮತದಾನವಾಗಿದೆ.
ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಮತಗಟ್ಟೆಯಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಮತದಾನ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಪಟೂರು ತಾಲ್ಲೂಕಿನ ಸಾರ್ಥವಳ್ಳಿ, ಹಾಲ್ಕುರಿಕೆ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು.
ಮೈಸೂರು ಜಿಲ್ಲೆಯ ಮೈಸೂರು, ನಂಜನಗೂಡು ಮತ್ತು ತಿ.ನರಸೀಪುರ ತಾಲ್ಲೂಕುಗಳಲ್ಲಿ ಬೆಳಿಗ್ಗೆ 11 ರ ವೇಳೆಗೆ ಶೇ 18.47 ಮತದಾನ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 2 ನೇ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆ ತನಕ ಶೇ 33.41 ಮತದಾನ ದಾಖಲಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 33.59 , ಪುತ್ತೂರು- ಶೇ 34.23, ಸುಳ್ಯ - ಶೇ 31.62 ಮತ್ತು ಕಡಬ ಶೇ 33.81 ಮತದಾನ ನಡೆದಿದೆ.
ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಗ್ರಾಮ ಪಂಚಾಯಿತಿಯ ವಾರ್ಡ್ ನಂ. 6ರಲ್ಲಿ ಅಭ್ಯರ್ಥಿಯೊಬ್ಬರಿಗೆ ನೀಡಿದ ಚಿಹ್ನೆಯು ತಪ್ಪಾಗಿ ಮುದ್ರಿತಗೊಂಡಿದ್ದರಿಂದ ಆ ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ.
ಮತದಾನ ವಿವರ: ಹುಬ್ಬಳ್ಳಿ ತಾಲ್ಲೂಕು- ಶೇ 7.97, ಕುಂದಗೋಳ ತಾಲೂಕು- ಶೇ.7.33, ಅಣ್ಣಿಗೇರಿ ತಾಲೂಕು- ಶೇ.8.85, ನವಲಗುಂದ ತಾಲೂಕು- ಶೇ.8.95
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 2ನೇ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಭಾನುವಾರ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 9 ಗಂಟೆ ತನಕ ಶೇ 14.83 ಮತದಾನ ದಾಖಲಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 15.29 , ಪುತ್ತೂರು- ಶೇ 15.51, ಸುಳ್ಯ ಶೇ 13.81 ಮತ್ತು ಕಡಬ ಶೇ 14.03ರಷ್ಟು ಮತದಾನ ನಡೆದಿದೆ.
ಗದಗ: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಗಾಗಿ ಮುಂಡರಗಿ, ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳಲ್ಲಿ ಸ್ಥಾಪಿಸಿರುವ 424 ಮತಗಟ್ಟೆಗಳಲ್ಕಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಬೆಳಿಗ್ಗೆ 9 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 8.22, ನರಗುಂದ ಶೇ 8.29, ರೋಣ ಶೇ. 6.62 ಹಾಗೂ ಗಜೇಂದ್ರಗಡ ತಾಲ್ಲೂಕಿನಲ್ಲಿ ಶೇ. 7.74 ಸೇರಿದಂತೆ ಒಟ್ಟು ಶೇ. 7.69 ರಷ್ಟು ಮತದಾನವಾಗಿದೆ.
ಹುಬ್ಬಳ್ಳಿ: ತಾಲ್ಲೂಕಿನ ಕಟ್ನೂರು ಗ್ರಾಮ ಪಂಚಾಯ್ತಿಯಲ್ಲಿ ವಾರ್ಡ್ಗಳ ಮೀಸಲಾತಿ, ವ್ಯಾಪ್ತಿ ಹಾಗೂ ಮತದಾರರ ಪಟ್ಟಿಯಲ್ಲಿನ ಗೊಂದಲದಿಂದಾಗಿ ಗ್ರಾಮಸ್ಥರು ಹಾಗೂ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರು. ಮತದಾನ ಮುಂದೂಡುವಂತೆ ಪಟ್ಟು ಹಿಡಿದರು.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಮತದಾನ ದಿನವಾದ ಭಾನುವಾರ ಕೂಡ ಸಂತೆ ನಡೆಯಿತು. ಗ್ರಾಮದಲ್ಲಿ ಪ್ರತಿ ಭಾನುವಾರ ವಾರದ ಸಂತೆ ನಡೆಯುತ್ತದೆ. ಚುನಾವಣೆ ನಿಮಿತ್ತ ಸಂತೆ ನಿಷೇಧದ ನಡುವೆಯೂ ಗ್ರಾಮ ಪಂಚಾಯಿತಿ ಅಧಿಕಾರಿ ಸಂತೆ ನಡೆಯಲು ಪರೋಕ್ಷವಾಗಿ ಅವಕಾಶ ನೀಡಿರುವುದು ಬೆಳಕಿಗೆ ಬಂದಿದೆ.
ಚಳ್ಳಕೆರೆ ತಾಲ್ಲೂಕಿನ ಸೋಮಗುದ್ಧು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಮದುರೆ ಮತ್ತು ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮ ಹಾಗೂ ಮಹಾದೇವ ಪುರ ಗ್ರಾಮದಲ್ಲಿ ಮತಪತ್ರದಲ್ಲಿ ದೋಷ ಕಂಡುಬಂದ ಕಾರಣ ಮರು ಮುದ್ರಿಸಿ ಮತದಾನಕ್ಕೆ ಅವಕಾಶ ನೀಡಲಾಯಿತು.
ತುಮಕೂರು: ಬೆಳಿಗ್ಗೆ 9ರವರೆಗೆ ಮಧುಗಿರಿ ತಾಲ್ಲೂಕಿನಲ್ಲಿ ಶೇ 8.6, ಚಿಕ್ಕನಾಯಕನಹಳ್ಳಿ ಶೇ 7.34, ತಿಪಟೂರು 6.47, ತುರುವೇಕೆರೆ ಶೇ 7.82 ಮತ್ತು ಶಿರಾದಲ್ಲಿ 8.69 ರಷ್ಟು ಮತದಾನವಾಗಿದೆ.
ಬಾಗಲಕೋಟೆ: ತಾಲ್ಲೂಕಿನ ಕಲಾದಗಿಯ 11ನೇ ವಾರ್ಡ್ ನ ಮತಗಟ್ಟೆ ಸಂಖ್ಯೆ 51ರಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು ಬದಲು ಆಗಿ ಗೊಂದಲ ಸೃಷ್ಟಿಯಾಗಿದೆ. ಮತದಾನ ಸ್ಥಗಿತಗೊಂಡಿದೆ.
ರಾಯಚೂರು: ಜಿಲ್ಲೆಯಿಂದ ವಿವಿಧೆಡೆ ಗುಳೆ ಹೋಗಿದ್ದ ಜನರು ಮತದಾನ ಮಾಡಲು ವಾಹನಗಳಲ್ಲಿ ಗುಂಪುಗುಂಪಾಗಿ ಗ್ರಾಮಗಳಿಗೆ ಬರುತ್ತಿದ್ದಾರೆ. ಲಿಂಗಸುಗೂರು, ಮಸ್ಕಿ ತಾಲ್ಲೂಕಿನ ಗ್ರಾಮಗಳಲ್ಲಿ ಮತದಾರರನ್ನು ಹೊತ್ತು ಸಾಗುತ್ತಿರುವ ವಾಹನಗಳ ನೋಟ ಸಾಮಾನ್ಯವಾಗಿದೆ. ಕ್ರೂಸರ್, ಜೀಪ್ , ಕಾರುಗಳು ಹಾಗೂ ಖಾಸಗಿ ಬಸ್ಸುಗಳಲ್ಲಿ ಮತದಾರರನ್ನು ಕರೆತರಲಾಗಿದೆ.
ಹಾವೇರಿ: ಜಿಲ್ಲೆಯ ಬ್ಯಾಡಗಿ, ಶಿಗ್ಗಾವಿ, ಸವಣೂರ, ಹಾನಗಲ್ ನಾಲ್ಕು ತಾಲ್ಲೂಕುಗಳ 105 ಗ್ರಾಮ ಪಂಚಾಯ್ತಿಗಳ ಎರಡನೇ ಹಂತದ ಚುನಾವಣೆಯಲ್ಲಿ ಭಾನುವಾರ ಬೆಳಿಗ್ಗೆ 9ರವರೆಗೆ ಶೇ 7.40 ಮತದಾನವಾಗಿದೆ. ಬ್ಯಾಡಗಿ ತಾಲ್ಲೂಕು- ಶೇ 7.52, ಹಾನಗಲ್ ತಾಲ್ಲೂಕು- ಶೇ 7.13, ಸವಣೂರ ತಾಲ್ಲೂಕು- ಶೇ 7.06, ಶಿಗ್ಗಾವಿ ತಾಲ್ಲೂಕು- ಶೇ 8.11 ಮತದಾನವಾಗಿದೆ.
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಬ್ಯಾಲೆಟ್ ಅದಲು ಬದಲಾಗಿದೆ. ಮತ್ತಿಹಳ್ಳಿ ಗ್ರಾಮ ಪಂಚಾಯಿತಿ 3 ಮತ್ತು 4 ನೇ ವಾರ್ಡ್ ನಲ್ಲಿ ಅದಲು ಬದಲಾಗಿದ್ದು ಮತದಾನ ಸ್ಥಗಿತಗೊಂಡಿದೆ. ಗ್ರಾಮಸ್ಥರು ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಬಾಗಲಕೋಟೆ: ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ (ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಇಳಕಲ್, ಹುನಗುಂದ) ಗ್ರಾಮ ಪಂಚಾಯ್ತಿ ಚುನಾವಣೆ ಎರಡನೇ ಹಂತದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಚಡಚಣ ಮತ್ತು ದೇವರ ಹಿಪ್ಪರಗಿ ತಾಲ್ಲೂಕಿನ 88 ಗ್ರಾಮ ಪಂಚಾಯಿತಿಗಳಿಗೆ ಬೆಳಿಗ್ಗೆ 7ರಿಂದ 9ರ ವರೆಗೆ ಶೇ 14.45ರಷ್ಟು ಮತದಾನವಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಸಿಧನೂರು, ಲಿಂಗಸುಗೂರು ಹಾಗೂ ಮಸ್ಕಿ ತಾಲ್ಲೂಕುಗಳಲ್ಲಿ ಮತದಾನ ಸುಗಮವಾಗಿ ಆರಂಭವಾಗಿದೆ.
ದಾವಣಗೆರೆ: ಎರಡನೇ ಹಂತದ ಗ್ರಾಮ ಚಾಯಿತಿ ಚುನಾವಣೆಯಲ್ಲಿ ಮೂರು ತಾಲ್ಲೂಕುಗಳಲ್ಲಿ ಬೆಳಿಗ್ಗೆ 9ರ ಹೊತ್ತಿಗೆ ಶೇ 5.41 ಮತದಾನವಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಶೇ 4.05 , ಹರಿಹರ ತಾಲ್ಲೂಕಿನಲ್ಲಿ ಶೇ 4.17, ನ್ಯಾಮತಿ ತಾಲ್ಲೂಕಿನಲ್ಲಿ ಶೇ 8.03 ಮತದಾನವಾಗಿದೆ. ಮೂರು ತಾಲ್ಲೂಕುಗಳ 101 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ.
ಬೆಳ್ತಂಗಡಿ (ದಕ್ಷಿಣ ಕನ್ನಡ) : ತಾಲ್ಲೂಕಿನ ಮುಂಡಾಜೆ ಗ್ರಾಮದ ಕೂಳೂರು ಇಬ್ರಾಹಿಂ ಕೂಳೂರು ಅವರ ಇಬ್ಬರು ಪುತ್ರಿಯರಾದ ಝುಹುರಾ ಮತ್ತು ಖೈರುನ್ನಿಸಾ ಸಹೋದರಿಯರು ತಮ್ಮದೇ ಮದುವೆ ಸಂಭ್ರಮದ ಮಧ್ಯೆ ಮುಂಡಾಜೆ ಗ್ರಾಮದ 103 ಸಂಖ್ಯೆಯ ಮತಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ದಾವಣಗೆರೆ: ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಬ್ಯಾಲೆಟ್ ಅದಲು ಬದಲಾಗಿದೆ. ಮತ್ತಿಹಳ್ಳಿ ಗ್ರಾಮ ಪಂಚಾಯಿತಿ 3 ಮತ್ತು 4 ನೇ ವಾರ್ಡ್ ನಲ್ಲಿ ಅದಲು ಬದಲಾಗಿದ್ದು ಮತದಾನ ಸ್ಥಗಿತಗೊಂಡಿದೆ. ಗ್ರಾಮಸ್ಥರು ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ಮತಗಟ್ಟೆಯಲ್ಲಿ ಮಹಿಳಾ ಮತದಾರರು ಮತಪೆಟ್ಟಿಗೆಗೆ ಆರತಿ ಬೆಳಗಿ ಮತ ಹಾಕಲು ಮುಂದಾದ ಕುತೂಹಲಕರ ಘಟನೆ ನಡೆದಿದೆ.
ಆದರೆ, ಚುನಾವಣಾ ಸಿಬ್ಬಂದಿ ಆರತಿ ತಟ್ಟೆಯನ್ನು ಮತದಾನ ಕೊಠಡಿಯೊಳಗೆ ಬಿಡದೆ ತಡೆದರು. ಬಳಿಕ ಮತಗಟ್ಟೆ ಹೊರಗಡೆಯೇ ಅರತಿ ಬೆಳಗಿದ ಮಹಿಳೆಯರು, ನಂತರ ಮತ ಚಲಾಯಿಸಿದರು.
ತುಮಕೂರು: ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮಧುಗಿರಿ ಮತ್ತು ಶಿರಾ ತಾಲ್ಲೂಕಿನಲ್ಲಿ ಎರಡನೇ ಹಂತದ ಮತದಾನ ಆರಂಭವಾಗಿದೆ.
ಒಟ್ಟು 161 ಪಂಚಾಯಿತಿಗಳ 2,400 ಸದಸ್ಯ ಸ್ಥಾನಗಳಿಗೆ, 1,321 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದೆ.
131ಅತಿ ಸೂಕ್ಷ್ಮ, 198 ಸೂಕ್ಷ್ಮ ಮತ್ತು 992 ಸಾಮಾನ್ಯ ಮತಗಟ್ಟೆಗಳು ಇವೆ.
ಶಿರಾ ತಾಲ್ಲೂಕಿನ ಚಿರತಹಳ್ಳಿಯಲ್ಲಿ ಶಾಸಕ ಡಾ.ಎಂ.ಸಿ.ರಾಜೇಶ್ ಗೌಡ ಮತಚಲಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.