ಚಿಕ್ಕಮಗಳೂರು: ‘ಬೆದರಿಕೆ ಕರೆ ಮಾಡುವವರು ಹೇಡಿಗಳು. ತಾಕತ್ತು ಇದ್ದರೆ ಎದುರು ಮಾತನಾಡಬೇಕು. ಹೇಡಿಗಳಿಗೆ ಹೆದರಲ್ಲ’ ಎಂದು ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದರು.
ಬೆದರಿಕೆ ಕರೆಗಳು ಬಂದಿರುವುದಾಗಿ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ‘ಬೆದರಿಕೆ ಕರೆಗಳು ನನಗೂ ಬಹಳ ಬಂದಿದ್ದವು. ಈ ಫೀಲ್ಡಿಗೆ ಇಳಿಯುವ ಸಂದರ್ಭದಲ್ಲಿ ಇದೆಲ್ಲವನ್ನು ಎದುರಿಸಲು ಸಿದ್ಧರಿರಬೇಕು. ಪೊಲೀಸ್ಇಲಾಖೆ, ಸಮಾಜ ನಮ್ಮೊಂದಿಗೆ ಇದೆ. ಆ ಧೈರ್ಯದಲ್ಲೇ ಸಾಗುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.