ADVERTISEMENT

ನಿಮ್ಮ ಸರ್ಕಾರದ ಘನ ಕಾರ್ಯ ತಿಳಿದುಕೊಳ್ಳಿ: ಸುರ್ಜೇವಾಲಗೆ ಬಿಜೆಪಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 13:20 IST
Last Updated 12 ಏಪ್ರಿಲ್ 2021, 13:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಕ್ಷದ ನಾಯಕರು ಎಲ್ಲ ಧರ್ಮಕ್ಕೂ ಮೋಸ ಮಾಡಿದ್ದಾರೆ ಎಂಬ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಹೇಳಿಕೆಗೆ ಬಿಜೆಪಿ ಕಟುವಾಗಿ ತಿರುಗೇಟು ನೀಡಿದೆ.

ಸುರ್ಜೇವಾಲ ಹೇಳಿಕೆಗೆ ಪ್ರತಿಕ್ರಿಯಿಸಿ ರಾಜ್ಯ ಬಿಜೆಪಿ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ‘ನಿಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ಮಾಡಿದ ಘನ ಕಾರ್ಯಗಳನ್ನು ಒಮ್ಮೆ ಕೇಳಿ ತಿಳಿದುಕೊಳ್ಳಿ. ವೀರಶೈವ, ಲಿಂಗಾಯತ ಎಂದು ಧರ್ಮಾಗ್ನಿ ಹಚ್ಚಿದರು. ದಲಿತರು ಮೇಲ್ವರ್ಗದವರು ಎಂಬ ಕಂದಕ ಸೃಷ್ಟಿಸಿದರು. ಸಮುದಾಯ ಆಧಾರಿತ ಭಾಗ್ಯ ಕರುಣಿಸಿದರು. ಹಿಂದೂಗಳಿಗೆ ಹತ್ಯಾಭಾಗ್ಯ ನೀಡಿದರು’ ಎಂದು ಉಲ್ಲೇಖಿಸಲಾಗಿದೆ.

ಬಿಜೆಪಿ ನಾಯಕರು ಚುನಾವಣೆ ವೇಳೆ ಮರಾಠ ಸಮುದಾಯವನ್ನು 2(ಎ) ಅಡಿ ತರುವುದಾಗಿ, ಪಂಚಮಸಾಲಿ ಜನಾಂಗದವರಿಗೆ ಮೀಸಲಾತಿ ನೀಡುವುದಾಗಿ ಮತ್ತು ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವುದಾಗಿ ಸಾರಿಗೆ ಸಿಬ್ಬಂದಿಗೆ ಭರವಸೆ ನೀಡಿದ್ದರು. ಆದರೆ ಎಲ್ಲ ಧರ್ಮದವರಿಗೂ ಮೋಸ ಮಾಡಿದ್ದಾರೆ ಎಂದು ಸುರ್ಜೇವಾಲ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.