ಹಾಸನ: ‘ಮದ್ದಿಲ್ಲದ ಕಾಯಿಲೆ ಬರುತ್ತೆ ಅಂತ ನಾ ಹೇಳಿದ್ದು ನಿಜವಾಗಿದೆ. ಕೋವಿಡ್ 19 ವೈರಸ್ ಸಾವಿರಾರು ಸಂಖ್ಯೆಯಲ್ಲಿ ಜೀವ ಬಲಿ ಪಡೆಯಲಿದೆ. ಆದರೆ, ಈ ಮದ್ದಿಲ್ಲದ ಸೋಂಕಿಗೆ ಭಾರತದ ಮಂತ್ರಶಕ್ತಿಯಲ್ಲಿ ಪರಿಹಾರ ಇದೆ’ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈಗ ಬಂದಿರುವ ಕೋವಿಡ್ 19 ವೈರಾಣು ವಿಶ್ವವನ್ನು ಆವರಿಸಲಿದೆ, ಸಾವಿರಾರು ಜನ ಈ ಸೋಂಕಿಗೆ ಬಲಿಯಾಗಲಿದ್ದಾರೆ. ಈ ಕಾಯಿಲೆ ಭವಿಷ್ಯದಲ್ಲಿ ಜಡತ್ವದಂತಹ ಕಲ್ಲು, ಮಣ್ಣು, ಮರಗಳಿಗೂ ಆವರಿಸಲಿದೆ’ ಎಂದು ಹೇಳಿದರು.
‘ಈ ಸೋಂಕಿಗೆ ಮದ್ದು ಕಂಡು ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಇದಕ್ಕೆ ಭಾರತದಲ್ಲಿ ಮಾತ್ರ ಪರಿಹಾರ ಇದೆ. ಋಷಿ ಮುನಿಗಳು ಕೊಟ್ಟ ಗಿಡಮೂಲಿಕೆ, ಹಳ್ಳಿ ನಾಟಿ ವೈದ್ಯರಿಂದ ಮಾತ್ರ ಈ ಸೋಂಕು ಗುಣಪಡಿಸಲು ಸಾಧ್ಯ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.