ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2019ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದು, ಮಂಗಳೂರಿನ ಗೋಕುಲ್ದಾಸ್ ಪ್ರಭು (ಸಾಹಿತ್ಯ), ಕುಂದಾಪುರದ ಆರ್ಗೋಡು ಮೋಹನ್ದಾಸ್ ಶೆಣೈ(ಕಲೆ) ಹಾಗೂ ಕಾರವಾರದ ಕಿನ್ನರಗ್ರಾಮದ ವಿಷ್ಣು ಶಾಬುರಾಣೆ (ಜಾನಪದ) ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ.
ಮಂಗಳೂರಿನ ವೆಂಕಟೇಶ್ ನಾಯಕ್ ಅವರ 'ವಾಟೇ ವಯಲೆಂ ರಗತ' ಕವನ ಸಂಕಲನ, ಪಿಯುಸ್ ಪಿದಲಿಸ್ ಪಿಂಟೊ ಅವರ 'ಕೆನರಾಂತ್ ಪಾದ್ರೊವಾದೊ ಅನಿ ಪ್ರೊಪಗಾಂದಾಚೊ ವಿವಾದ್' ಅಧ್ಯಯನ ಕೃತಿ, ಕ್ಲೆರೆನ್ಸ್ ಡೊನಾಲ್ಡ್ ಪಿಂಟೊ ಅವರ 'ಕಥಾಮೃತ್' ಸಣ್ಣಕತೆ ವಿಭಾಗದಲ್ಲಿ ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಪುರಸ್ಕಾರವು ₹ 5 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕಗಳನ್ನು ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.