ಕೆ.ಎಸ್.ಸೋಮಶೇಖರ್
ನವದೆಹಲಿ: ರಾಜ್ಯಸಭೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕನ್ನಡಿಗ ಅಧಿಕಾರಿ ಕೆ.ಎಸ್. ಸೋಮಶೇಖರ್ ಅವರನ್ನು ನೇಮಕ ಮಾಡಲಾಗಿದೆ.
ಕೋಲಾರದ ಶ್ರೀನಿವಾಸಪುರದವರಾದ ಇವರು ರಾಜ್ಯಸಭೆಯ ಇಂಟರ್ಪ್ರಿಟರ್ (ಏಕಕಾಲಿಕ ವ್ಯಾಖ್ಯಾನಕಾರ) ಆಗಿ 1993ರಲ್ಲಿ ಸೇವೆಗೆ ಸೇರಿದ್ದರು. ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಏರಿದ ಮೊದಲ ಕನ್ನಡಿಗ ಅಧಿಕಾರಿ. ಈ ಮೊದಲು ರಾಜ್ಯಸಭೆಯ ನಿರ್ದೇಶಕರಾಗಿದ್ದರು.
ಈ ಹಿಂದೆ ಕೇಂದ್ರದ ರೈಲ್ವೆ ಹಾಗೂ ಜವಳಿ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದರು. ಕರ್ನಾಟಕ ರಾಜ್ಯ ಸೇವೆಗೆ ನಿಯೋಜನೆಯಲ್ಲಿ ಬಂದಿದ್ದ ಅವರು, ಪರಮೇಶ್ವರ ಉಪಮುಖ್ಯಮಂತ್ರಿಯಾಗಿದ್ದ ವೇಳೆ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.