ಬೆಂಗಳೂರು: ಲಾಕ್ಡೌನ್ನಿಂದಾಗಿ ಸ್ತಬ್ಧವಾಗಿದ್ದನಗರದಲ್ಲಿ ಭಾನುವಾರ ಮಧ್ಯಾಹ್ನದಿಂದಗಾಳಿ ಸಹಿತ ಧಾರಕಾರವಾಗಿ ಮಳೆಯಾಗಿದೆ.
ನಗರದರಾಜಾಜಿನಗರ, ಮಲ್ಲೇಶ್ವರ, ಮಹಾಲಕ್ಷ್ಮಿ ಲೇಔಟ್, ಬಸವನಗುಡಿ, ಆರ್.ಟಿ.ನಗರ, ಯಲಹಂಕ, ಪೀಣ್ಯ, ವಿಧಾನಸೌಧ ಸುತ್ತಮುತ್ತ, ಶಿವಾನಂದ ವೃತ್ತ, ನಾಯಂಡಹಳ್ಳಿಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಆರ್ಭಟ ಜೋರಾಗಿತ್ತು.ಎಲ್ಲೆಡೆಯೂ ಮೋಡ ಕವಿದ ವಾತವರಣವಿತ್ತು. ಮಧ್ಯಾಹ್ನವೇ ಜೋರು ಮಳೆ ಶುರುವಾಗಿದೆ. ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಅಲ್ಲಲ್ಲಿ ತುರ್ತು ವಾಹನಗಳ ಸಂಚಾರ ಹೊರತುಪಡಿಸಿ ಬೆಂಗಳೂರಿನಲ್ಲಿ ರಸ್ತೆ ಖಾಲಿ ಖಾಲಿಯಾಗಿತ್ತು. ಈ ಖಾಲಿ ರಸ್ತೆಯಲ್ಲಿ ಮಳೆಯ ನರ್ತನ ಮುಂದುವರಿದಿತ್ತು. ನಗರದ ಯಾವ ಕಡೆಗಳಲ್ಲೂ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.