ADVERTISEMENT

ಸಂತ್ರಸ್ತೆ ಬಾಳಲ್ಲಿ ಗಟ್ಟಿಮೇಳ

ಮತ್ತೊಂದು ಮದುವೆಗೆ ಸಾಕ್ಷಿಯಾದ ಓಂಕಾರೇಶ್ವರ ದೇಗುಲ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
ಮಡಿಕೇರಿ ಖಾಸಗಿ ಹೋಟೆಲ್‌ನಲ್ಲಿ ಕುಸುಮಾ ಹಾಗೂ ಧನಂಜಯ್‌ ಅವರ ಆರತಕ್ಷತೆ ನೆರವೇರಿತು
ಮಡಿಕೇರಿ ಖಾಸಗಿ ಹೋಟೆಲ್‌ನಲ್ಲಿ ಕುಸುಮಾ ಹಾಗೂ ಧನಂಜಯ್‌ ಅವರ ಆರತಕ್ಷತೆ ನೆರವೇರಿತು   

ಮಡಿಕೇರಿ: ಮದುವೆಯ ಕನಸನ್ನೇ ಮಹಾಮಳೆ ನುಚ್ಚುನೂರು ಮಾಡಿತ್ತು. ಮನೆ, ಚಿನ್ನಾಭರಣ ಕಳೆದುಕೊಂಡಿದ್ದ ಮದುಮಗಳ ಕುಟುಂಬಸ್ಥರಿಗೂ ದಿಕ್ಕು ತೋಚದೆ ಮದುವೆಯ ದಿನಾಂಕ ಮುಂದೂಡಲು ನಿರ್ಧರಿಸಿದ್ದರು.

ಆದರೆ, ಧೈರ್ಯ ಕಳೆದುಕೊಳ್ಳದ ವರ ಮಾತ್ರ ನಿಗದಿತ ಮುಹೂರ್ತದಲ್ಲಿ ಸರಳವಾಗಿ ಮದುವೆ ಮಾಡಿಕೊಡುವಂತೆ ಯುವತಿಯ ಕುಟುಂಬಸ್ಥರನ್ನು ಮನವೊಲಿಸಿದ್ದು, ನಗರದ ಓಂಕಾರೇಶ್ವರ ದೇಗುಲದಲ್ಲಿ ಗುರುವಾರ ಸರಳವಾಗಿ ನೆರವೇರಿತು.

ಹಟ್ಟಿಹೊಳೆಯ ಕುಸುಮಾ ಅವರನ್ನು ಅರೆಕಾಡು ಗ್ರಾಮದ ಧನಂಜಯ ವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.