ರಾಯಚೂರು: ‘ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಬುಧವಾರ ರಾಜೀನಾಮೆ ಕೊಡುವುದು ನಿಶ್ಚಿತ’ ಎಂದು ಆಪ್ತ ಮೂಲಗಳು ತಿಳಿಸಿವೆ.
‘ಬಿಜೆಪಿ ಬೆಂಬಲಿಸುವ ಶಾಸಕರನ್ನು ಬೆಂಗಳೂರಿನಲ್ಲಿ ಒಂದು ಕಡೆ ಇರಿಸಲಾಗಿದೆ’ ಎನ್ನುವುದು ಈ ಮೂಲಗಳ ವಿವರಣೆ.
‘ರಾಜೀನಾಮೆ ನೀಡುವ ಪರಿಸ್ಥಿತಿ ಏನಿಲ್ಲ. ಅಮಾವಾಸ್ಯೆ ಇರುವುದರಿಂದ ದೇವಸ್ಥಾನಕ್ಕೆ ಬಂದಿದ್ದೇನೆ. ಬುಧವಾರ ಮಸ್ಕಿಗೆ ಬರುತ್ತೇನೆ’ ಎಂದು ಪ್ರತಾಪಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ಆದರೆ ತಾವಿರುವ ಸ್ಥಳದ ಮಾಹಿತಿ ನೀಡುವುದಕ್ಕೆ ಅವರು ತಡವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.