ADVERTISEMENT

ಹಿಂದೂ ಯುವಕರ ಹತ್ಯೆಯಾದಾಗ ಏಕೆ ಶೂಟೌಟ್‌ ಮಾಡಿ ಅನ್ನಲಿಲ್ಲ?: ಈಶ್ವರಪ್ಪ ಪ್ರಶ್ನೆ

ಶಾಸಕ ಈಶ್ವರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 17:59 IST
Last Updated 26 ಡಿಸೆಂಬರ್ 2018, 17:59 IST
   

ಬಾಗಲಕೋಟೆ: ‘ಜೆಡಿಎಸ್‌ ಕಾರ್ಯಕರ್ತನ ಕೊಲೆ ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಟ್ಟಾಜ್ಞೆ ಮಾಡುತ್ತಾರೆ. ಆದರೆ, ಅದೇ 22 ಮಂದಿ ಹಿಂದೂ ಯುವಕರು ಕೊಲೆಯಾದಾಗ ಏಕೆ ಆ ರೀತಿ ಅವರು ಹೇಳಿರಲಿಲ್ಲ’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

‘ಹಿಂದೂ ಯುವಕರ ಕೊಲೆಗೊಂದು ನ್ಯಾಯ, ಜೆಡಿಎಸ್‌ ಕಾರ್ಯಕರ್ತನ ಕೊಲೆಗೊಂದು ನ್ಯಾಯವೇ? ಇಷ್ಟಕ್ಕೂ ಮುಖ್ಯಮಂತ್ರಿ, ಗೂಂಡಾಗಳ ರೀತಿ ಶೂಟೌಟ್‌ ಮಾಡಿ ಎಂದು ಹೇಳಿದ್ದು ಸರಿಯಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಸುಳ್ಳು ಹೇಳುವ ಹುಚ್ಚು ಹೆಚ್ಚಿದೆ’ (ಕಗ್ಗೋಡ/ವಿಜಯಪುರ): ‘ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಸುಳ್ಳು ಹೇಳುವ ಹುಚ್ಚು ಹೆಚ್ಚುತ್ತಿದೆ. ಒಂದೊಂದು ಕಡೆ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.