ADVERTISEMENT

5 ಜಿಲ್ಲೆಗಳಲ್ಲಿ ಇಂದು ‘ರೆಡ್ ಅಲರ್ಟ್’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 20:22 IST
Last Updated 8 ಆಗಸ್ಟ್ 2020, 20:22 IST
ಕಪಿಲಾ ನದಿ ತುಂಬಿ ಹರಿಯುತ್ತಿರುವುದು
ಕಪಿಲಾ ನದಿ ತುಂಬಿ ಹರಿಯುತ್ತಿರುವುದು   
""

ಬೆಂಗಳೂರು: ರಾಜ್ಯದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆ.9ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಾಸನ, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ಮಳೆ-ಎಲ್ಲಿ, ಎಷ್ಟು?: ಸುಳ್ಯ 19, ಹೊಸನಗರ 15, ಶೃಂಗೇರಿ 14, ಕುಂದಾಪುರ 13, ಉಪ್ಪಿನಂಗಡಿ, ಕೊಟ್ಟಿಗೆಹಾರ 12, ವಿರಾಜಪೇಟೆ 11, ಬ್ರಹ್ಮಾವರ, ಕೊಪ್ಪ, ಮಡಿಕೇರಿ 10, ಮೂಡುಬಿದರೆ 9, ಭಟ್ಕಳ, ಕೊಲ್ಲೂರು, ಪುತ್ತೂರು 7, ಸಾಗರ 6, ಅಂಕೋಲಾ, ಮೂಡಿಗೆರೆ, ತೀರ್ಥಹಳ್ಳಿ 5, ಹಾಸನ, ಅರಕಲಗೂಡಿನಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.