ADVERTISEMENT

ಅಮಿತ್‌ ಶಾ 10 ಬಾರಿ ಮಂಡ್ಯಕ್ಕೆ ಬಂದರೂ JDS ಶಕ್ತಿ ಕುಗ್ಗಲ್ಲ: ಪ್ರಜ್ವಲ್ ರೇವಣ್ಣ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 15:34 IST
Last Updated 16 ಜನವರಿ 2023, 15:34 IST
ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ   

ಕೋಲಾರ: ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ 10 ಬಾರಿ ಬಂದರೂ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಶಕ್ತಿ ಕುಂದಿಸಲು ಆಗುವುದಿಲ್ಲ. ನಂದಿನಿಯನ್ನು ತೆಗೆದುಕೊಂಡು ಹೋಗಿ ಅಮೂಲ್‌ ಜೊತೆ ವಿಲೀನ ಮಾಡುವ ಮಾತನಾಡಿದ್ದಾರೆ. ನಂದಿನಿ ಯಾರಪ್ಪನ ಮನೆ ಆಸ್ತಿ? ನಂದಿನಿಯನ್ನು ದೊಡ್ಡಮಟ್ಟದಲ್ಲಿ ಬೆಳೆಸಿದ್ದು ರೈತರು ಹಾಗೂ ಬಡ ಕುಟುಂಬದವರು. ತಂದೆ ರೇವಣ್ಣ ಅವರ ಪಾತ್ರವೂ ಇದೆ. ಈಗ ಬಿಜೆಪಿಯವರು ಮಾರಲು ಹೊರಟಿದ್ದಾರೆ’ ಎಂದು ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ತಿರುಗೇಟು ನೀಡಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಅವರ ವೈಯಕ್ತಿಕ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಆದರೆ, ಅವರನ್ನು ಇಲ್ಲಿಗೆ ಕರೆ ತಂದು ಹರಕೆ ಕುರಿ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.