ಬಾಗಲಕೋಟೆ: ಮುಧೋಳದ ಸಕ್ಕರೆ ಕಾರ್ಖಾನೆಗಳು ರೈತರಿಗೆ ತೂಕ ಹಾಗೂ ಕಬ್ಬಿನಲ್ಲಿನ ಸಕ್ಕರೆ ಅಂಶದ (ರಿಕವರಿ) ನಿಗದಿ ವಿಚಾರದಲ್ಲಿ ರೈತರು ಮತ್ತು ಸರ್ಕಾರಗಳಿಗೆ ಮೋಸ ಮಾಡುತ್ತಿದ್ದು, ಇದನ್ನು ತಪ್ಪಿಸಬೇಕು ಎಂದು ಮುಧೋಳದ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ.
ಈ ವಂಚನೆಯಲ್ಲಿ ಜಿಲ್ಲಾಡಳಿತ ಕೂಡ ಕಾರ್ಖಾನೆ ಆಡಳಿತ ಮಂಡಳಿಗಳೊಂದಿಗೆ ಕೈಜೋಡಿಸಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಕಾರ್ಖಾನೆಗಳು 13-13:80 ರಿಕವರಿ ತೋರಿಸುತ್ತವೆ. ಪಕ್ಕದ ಬೆಳಗಾವಿ ಜಿಲ್ಲೆಯಲ್ಲೂ ಅಷ್ಟೇ ರಿಕವರಿ ತೋರಿಸಲಾಗುತ್ತಿದೆ. ಆದರೆ ಜಿಲ್ಲೆಯ ಕಾರ್ಖಾನೆಗಳು ಮಾತ್ರ 10-10:80 ರಿಕವರಿ ತೋರಿಸಿ ರೈತರಿಗೆ ಮೋಸ ಮಾಡುತ್ತಿವೆ ಎಂದು ದೂರಿದ್ದಾರೆ.
ಈ ಕಾರಣದಿಂದಾಗಿ ರೈತರಿಗೆ 1 ಟನ್ ಕಬ್ಬಿಗೆ ₹ 550-₹682 ವರೆಗೂ ವಂಚನೆಯಾಗುತ್ತಿದೆ. ಅಲ್ಲದೇ ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೂ ಸಕ್ಕರೆ ಸೆಸ್ ಹಾಗೂ ಅಬಕಾರಿ ಸೆಸ್ ರೂಪದಲ್ಲಿ ಬರುವ ಆದಾಯದಲ್ಲಿ ಸುಮಾರು ₹ 350 ರಿಂದ ₹ 500 ಕೋಟಿ ವಂಚಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.