ADVERTISEMENT

ಶಾ.ಮಂ.ಕೃಷ್ಣರಾಯರಿಗೆ ಅ.ನ.ಕೃ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಮೇ 2019, 18:48 IST
Last Updated 8 ಮೇ 2019, 18:48 IST
ಶಾ.ಮಂ. ಕೃಷ್ಣರಾಯ
ಶಾ.ಮಂ. ಕೃಷ್ಣರಾಯ   

ಶಿರಸಿ: ಬೆಂಗಳೂರಿನ ಅ.ನ.ಕೃ ಪ್ರತಿಷ್ಠಾನ ನೀಡುವ ಅ.ನ.ಕೃ ಪ್ರಶಸ್ತಿಗೆ ಸಾಹಿತಿ, ಅನುವಾದಕ ಶಾ.ಮಂ. ಕೃಷ್ಣರಾಯ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 50 ಸಾವಿರ ನಗದು, ಪ್ರಶಸ್ತಿಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ.

ಅ.ನ.ಕೃ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಕೃಷ್ಣರಾಯರು, ಅವರ ಮೇಲೆ ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಈವರೆಗೆ ಕೃಷ್ಣರಾಯರ 91 ಕೃತಿಗಳು ಪ್ರಕಟಗೊಂಡಿವೆ. ಮೇ 12ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಗೌತಮ ಅ.ನ.ಕೃ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT