ADVERTISEMENT

ಭಾರತ್‌ ಬಂದ್‌: ರೈತರ ಹೆಸರಿನಲ್ಲಿ ರಾಜಕಾರಣ –ನಳಿನ್‌ ಕುಮಾರ್‌ ಕಟೀಲ್ ಟೀಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 11:51 IST
Last Updated 26 ಸೆಪ್ಟೆಂಬರ್ 2021, 11:51 IST
ನಳಿನ್‌ಕುಮಾರ್‌ ಕಟೀಲ್
ನಳಿನ್‌ಕುಮಾರ್‌ ಕಟೀಲ್   

ಬೆಳಗಾವಿ: ‘ರೈತರ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಎರಡು ವರ್ಷದಿಂದ ಬಂದ್‌ ಸೇರಿದಂತೆ ಹತ್ತಾರು ಪ್ರಯತ್ನಗಳನ್ನು ಮಾಡಿದ್ದಾರೆ. ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ಆದರೆ, ರೈತರು ಮತ್ತು ಜನರು ಸರ್ಕಾರದ ಪರವಾಗಿದ್ದಾರೆ’ ಎಂದರು.

‘ಕೆಲ ಸಂಘಟನೆಗಳವರು ಬಂದ್‌ಗೆ ಕರೆ ನೀಡಿರುವುದು ರೈತ ವಿರೋಧಿ ಎನಿಸುತ್ತಿದೆ. ನಮ್ಮ ಸರ್ಕಾರ ರೈತರ ಪರವಾಗಿದೆ. ಹಲವು ಬಾರಿ ಚರ್ಚೆಗೆ ಕರೆದಿದೆ. ಎಲ್ಲ ರೈತರೊಂದಿಗೆ ಚರ್ಚಿಸಲು ಕೇಂದ್ರ ಸಿದ್ಧವಿದೆ. ಈ ವಿಷಯದಲ್ಲಿ ವಿರೋಧಪಕ್ಷದವರು ರಾಜಕಾರಣ ಮಾಡುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಶಾಸಕ ಅಭಯ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ವಿವೇಚನಗೆ ಬಿಟ್ಟ ವಿಚಾರ’ ಎಂದರು.

‘ಕಲಬುರ್ಗಿ ಮಹಾನಗರಪಾಲಿಕೆಯಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.