ಮಡಿಕೇರಿ: ದಸರಾ ದಶಮಂಟಪ ತೀರ್ಪಿನಲ್ಲಿ ನ್ಯಾಯಯುತ ತೀರ್ಪು ಬಂದಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂದು ಮಡಿಕೇರಿ ದಸರಾ ಜನೋತ್ಸವ ದಶಮಂಟಪ ಸಮಿತಿ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೀರ್ಪಿನ ವಿಚಾರದಲ್ಲಿ ಬಹುಮಾನ ಸಿಗದ ಕೆಲವರು ಇಲ್ಲ ಸಲ್ಲದ ಗೊಂದಲ ಸೃಷ್ಟಿಮಾಡುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿಯೂಈ ಬಗ್ಗೆ ಸಾಕಷ್ಟು ಟೀಕೆ ಬರುತ್ತಿವೆ. ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಶಮಂಟಪದ ತೀರ್ಪುಗಾರರಾಗಿ ಆಗಮಿಸುವಂತೆ ಸುಮಾರು 30 ಮಂದಿಯ ಬಳಿ ಮನವಿ ಮಾಡಿದ್ದೆವು. ಆದರೆ ಯಾರೊಬ್ಬರೂ ಬರಲು ಒಪ್ಪಿರಲಿಲ್ಲ. ಆ ನಂತರ ಮನವಿಗೆ ಸ್ಪಂದಿಸಿ ತೀರ್ಪುಗಾರರಾಗಿಕೊನೆ ಕ್ಷಣದಲ್ಲಿ ಮಡಿಕೇರಿಯ ದಸರೆ ಆಚರಣೆ ಅನುಭವವಿರುವರವಿಶಂಕರ್, ಸಂತೋಷ್, ವಿನೋದ್, ಉಲ್ಲಾಸ್ಆಗಮಿಸಿ ನ್ಯಾಯ ಸಮ್ಮತವಾಗಿ ತೀರ್ಪು ನೀಡಿದ್ದಾರೆ. ಇವರ ಆಯ್ಕೆಯು ಕೂಡ ವಿವಿಧ ದಶಮಂಟಪ ಮುಖಂಡರ ಸಮ್ಮುಖದಲ್ಲೇನಡೆದಿತ್ತು ಎಂದು ಹೇಳಿದರು.
ತೀರ್ಪಿನ ಅಂಕವನ್ನು ಲೆಕ್ಕ ಹಾಕುವಾಗ ಎಲ್ಲ ದಶಮಂಟಪಗಳ ಪ್ರಮುಖರು ಹಾಜರಿದ್ದರು. ಸದಸ್ಯರ ಸಮ್ಮುಖದಲ್ಲೇ ಅಂತಿಮ ಅಂಕಪಟ್ಟಿ ಬಹಿರಂಗ ಪಡಿಸಿದ್ದಾರೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವೈಯಕ್ತಿವಾಗಿ ನನ್ನ ಹಾಗೂ ತೀರ್ಪುಗಾರರ ವಿರುದ್ಧ ಹೇಳಿಕೆ ನೀಡುವುದು ಕಂಡುಬಂದಲ್ಲಿ ಸೈಬರ್ ಕ್ರೈಂಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಶಮಂಟಪ ಸಮಿತಿ ಕಾರ್ಯದರ್ಶಿ ಎಂ.ಎಲ್ ಸತೀಶ್, ಸದಸ್ಯರಾದ ಮೋಹನ್, ಅಭಿಜಿತ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.