ADVERTISEMENT

ಜಿ.ಟಿ ದೇವೇಗೌಡ ಉಚ್ಚಾಟನೆ ಬಗ್ಗೆ ಚರ್ಚಿಸಿಲ್ಲ: ಎಚ್‌.ಕೆ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 8:16 IST
Last Updated 11 ಜನವರಿ 2021, 8:16 IST
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.‌ಕೆ ಕುಮಾರಸ್ವಾಮಿ
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.‌ಕೆ ಕುಮಾರಸ್ವಾಮಿ    

ಚಿಕ್ಕಮಗಳೂರು: ‘ಶಾಸಕ ಜಿ.ಟಿ.ದೇವೇಗೌಡ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಎಲ್ಲಿಯೂ ಚರ್ಚೆ ಮಾಡಿಲ್ಲ. ಪಕ್ಷದಿಂದ ಗೆದ್ದ ಶಾಸಕ ಅವಧಿ ಮುಗಿಯುವವರೆಗೆ ಪಕ್ಷದಲ್ಲಿ ಇರುವುದು ಒಳ್ಳೆಯದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಇಲ್ಲಿ ಭಾನುವಾರ ಪ್ರತಿಕ್ರಿಯಿಸಿದರು.

‘ಉಚ್ಚಾಟನೆಗೆ ಈಗ ಯಾರೂ ಹೆದರುತ್ತಿಲ್ಲ. ಉಚ್ಚಾಟನೆ ಮಾಡಲಿ ಎಂದು ಅವರು ಕಾಯುತ್ತಿದ್ದಾರೆ. ಆಗ ಇನ್ನೂ ಹಗುರವಾಗಿ ಮಾತನಾಡಲು, ಬೇರೆ ನಡೆ ಇಡಲು ಅವಕಾಶವಾಗುತ್ತದೆ. ಅವರ ರೀತಿ ನೀತಿ ಗಮನಿಸಿದರೆ ಹಾಗೆ ಆನಿಸಿದೆ’ ಎಂದರು.

‘ಪಕ್ಷದ ಪ್ರತಿ ಸಭೆಗೂ ಅವರನ್ನು ಆಹ್ವಾನಿಸಿದ್ದೇವೆ. ಮೊನ್ನೆಯ ಸಭೆಗೂ ಅವರಿಗೆ ಕರೆ ಹೋಗಿತ್ತು. ಅವರು ಹಾಜರಾಗಿಲ್ಲ’ ಎಂದು ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.