ADVERTISEMENT

ಹಗರಿಬೊಮ್ಮನಹಳ್ಳಿ: ಮಾಲವಿಯಲ್ಲಿ ಪ್ರಸಾದ ಸೇವಿಸಿ 500 ಕ್ಕೂ ಅಧಿಕ ಜನ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 14:48 IST
Last Updated 14 ಮಾರ್ಚ್ 2020, 14:48 IST
   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಗ್ರಾಮದಲ್ಲಿ ಶನಿವಾರ ಯಮನೂರ್ ಉರುಸ್ ಪ್ರಸಾದ ಸೇವಿಸಿದ ಗ್ರಾಮದ 500ಕ್ಕೂ ಅಧಿಕ ಗ್ರಾಮಸ್ಥರು ವಾಂತಿ ಬೇಧಿಯಿಂದಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರಲ್ಲಿ 150ಕ್ಕೂ ಮಕ್ಕಳಿದ್ದಾರೆ.ಆಸ್ಪತ್ರೆಯಲ್ಲಿ ಅಸ್ವಸ್ಥರು ಗಾಬರಿಗೊಂಡಿದ್ದರು.

ದೇವರ ಪ್ರಸಾದ ಸಿಹಿ ಮಾದಲಿ, ಅನ್ನ ಸಾಂಬರ್ ಸೇವಿಸಿದ ಕೂಡಲೇ ವಾಂತಿ ಬೇಧಿ ಆರಂಭಗೊಂಡಿದೆ. ಅಸ್ವಸ್ಥರನ್ನು ಆಂಬುಲೆನ್ಸ್ ಮೂಲಕ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.