ADVERTISEMENT

ಪಾದರಾಯನಪುರ ದಾಂದಲೆ ಆರೋಪಿಗಳು ರಾಮನಗರ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 16:47 IST
Last Updated 20 ಏಪ್ರಿಲ್ 2020, 16:47 IST
ಪಾದರಾಯನಪುರದಲ್ಲಿ ಭಾನುವಾರ ಆರೋಗ್ಯ ಕಾರ್ಯಕರ್ತರು, ಪೊಲೀಸರ ಮೇಲೆ ಹಲ್ಲೆ ನಡೆದ ಪ್ರದೇಶ
ಪಾದರಾಯನಪುರದಲ್ಲಿ ಭಾನುವಾರ ಆರೋಗ್ಯ ಕಾರ್ಯಕರ್ತರು, ಪೊಲೀಸರ ಮೇಲೆ ಹಲ್ಲೆ ನಡೆದ ಪ್ರದೇಶ   

ರಾಮನಗರ: ಬೆಂಗಳೂರಿ‌ನ ಪಾದರಾಯನಪುರದಲ್ಲಿ ಭಾನುವಾರ ನಡೆದ ಗಲಾಟೆ ಸಂಬಂಧ ಬಂಧಿಸಲಾದ 54 ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲು ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ.

ಈ ಕುರಿತು ಫ್ಯಾಕ್ಸ್ ಮೂಲಕ ಸಂದೇಶ ರವಾನೆ ಆಗಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿ ಇರುವ ಆರೋಪಿಗಳನ್ನು ರಾಮನಗರಕ್ಕೆ ಕರೆತರಲಾಗುತ್ತದೆ.

ರಾಮನಗರ ಜೈಲಿನಲ್ಲಿರುವ 177 ಕೈದಿಗಳು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಆಗಲಿದ್ದಾರೆ. ಆದರೆ ರಾಮನಗರದಿಂದ ಸ್ಥಳಾಂತರಕ್ಕೆ ಇಲ್ಲಿನ ಕೈದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.