ಬೆಂಗಳೂರು: ರಾಮನಗರ ರೈಲ್ವೆ ಅಂಡರ್ ಪಾಸ್ನಲ್ಲಿ ಬಸ್ ನೀರಿನಲ್ಲಿ ಮುಳುಗಿದಾಗ ತಮ್ಮ ಪ್ರಾಣ ಲೆಕ್ಕಿಸದೆ ಪ್ರಯಾಣಿಕರನ್ನು ರಕ್ಷಿಸಿದ ಚಾಲಕ ಮತ್ತು ನಿರ್ವಾಹಕರಿಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ
ವಿ.ಅನ್ಬುಕುಮಾರ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ರಾಮನಗರದ ರೈಲ್ವೆ ಅಂಡರ್ ಪಾಸ್ನಲ್ಲಿ ಆ.29ರಂದು
ಬಸ್ ಸಿಲುಕಿಕೊಂಡಿತ್ತು. ಈಜು ಬಾರದಿದ್ದರೂ ನೀರಿನಲ್ಲಿ ಇಳಿದು ಏಣಿಯನ್ನು ಹುಡುಕಿ ತಂದು
ಪ್ರಯಾಣಿಕರನ್ನು ಚಾಲಕ ಲಿಂಗರಾಜು ಮತ್ತು ನಿರ್ವಾಹಕ ವೆಂಕಟೇಶ್ ರಕ್ಷಣೆ ಮಾಡಿದ್ದರು. ಧೈರ್ಯ ತೋರಿದ ಚಾಲನಾ ಸಿಬ್ಬಂದಿಯ ಕಾರ್ಯವನ್ನು ವಿ.ಅನ್ಬುಕುಮಾರ್ ಅವರು ಪ್ರಶಂಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.