ಬೆಂಗಳೂರು:‘ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಅಭ್ಯರ್ಥಿ ಜಿ.ಸಿ. ರಾಘವೇಂದ್ರ, ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು' ಸಿನಿಮಾದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಪಾತ್ರ ಮಾಡಿದ್ದ. ಅದರಿಂದ ಪ್ರೇರಣೆಗೊಂಡು, ಹಣ ನೀಡಿ ಅಕ್ರಮವಾಗಿ ಪಿಎಸ್ಐ ಆಗಲು ಹೊರಟಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.
‘ರಾಘವೇಂದ್ರನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತ ಪರೀಕ್ಷೆ ಬರೆದಿದ್ದ ಕೇಂದ್ರದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸಬೇಕಿದೆ’ ಎಂದೂ ತಿಳಿಸಿವೆ.
‘ನಟ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾನದಲ್ಲೂ ಆರೋಪಿ ರಾಘವೇಂದ್ರ, ಸೈನಿಕನ ಪಾತ್ರ ಮಾಡಿದ್ದ’ ಎಂದೂ ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.