ADVERTISEMENT

ನಮ್ಮ ಸರ್ಕಾರ ತನಿಖೆ ನಡೆಸಿದ್ದರಿಂದಲೇ ಪಿಎಸ್‌ಐ ಹಗರಣ ಬಯಲಿಗೆ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 11:39 IST
Last Updated 4 ಜುಲೈ 2022, 11:39 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಕುರಿತು ತನಿಖೆ ನಡೆಸಿದ್ದೇ ನಮ್ಮ ಸರ್ಕಾರ. ಹೀಗಾಗಿ, ಹಗರಣ ಬಯಲಿಗೆ ಬರಲು ಸಾಧ್ಯವಾಗಿದೆ. ಹಿಂದೆ ಪೊಲೀಸ್ ಇಲಾಖೆಯಲ್ಲಿ ಹಗರಣಗಳು ನಡೆದಿದ್ದರೂ ಯಾವ ಸರ್ಕಾರವೂ ತನಿಖೆಯನ್ನೇ ನಡೆಸಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮುಖಭಂಗ ಆಗಲು ಹೇಗೆ ಸಾಧ್ಯ? ತನಿಖೆ ನಡೆಸಿದ್ದೇ ನಮ್ಮ ಸರ್ಕಾರ ಎಂದು ಪುನರುಚ್ಚರಿಸಿದರು.

ಎಡಿಜಿಪಿ ಅಮೃತ್ ಪೌಲ್ ಬಂಧನ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.