ADVERTISEMENT

ಪತ್ರಕರ್ತ ರಾಮಚಂದ್ರ ನಿಧನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 17:35 IST
Last Updated 12 ಜುಲೈ 2019, 17:35 IST
ಸಿ.ಎಂ. ರಾಮಚಂದ್ರ
ಸಿ.ಎಂ. ರಾಮಚಂದ್ರ   

ಬೆಂಗಳೂರು: ಹಿರಿಯ ಪತ್ರಕರ್ತ ಸಿ.ಎಂ. ರಾಮಚಂದ್ರ (96) ಜಯನಗರದ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು.

‘ದಿ ಹಿಂದೂ’ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಮೌಲಿಕ ಮತ್ತು ವಸ್ತುನಿಷ್ಠ ಬರಹಗಳಿಗೆ ಹೆಸರಾಗಿದ್ದರು. ಅವರು ರಚಿಸಿದ್ದ ‘ಕಾಕ್‌ಪಿಟ್‌ ಆಫ್‌ ಇಂಡಿಯಾ’ಸ್‌ ಪೊಲಿಟಿಕಲ್‌ ಬ್ಯಾಟಲ್ಸ್‌–ಕರ್ನಾಟಕ’ ಎಂಬ ಪುಸ್ತಕ ಕಳೆದ ಮೇನಲ್ಲಿ ಬಿಡುಗಡೆಯಾಗಿತ್ತು.

ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ–ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು.

ADVERTISEMENT

ಬನಶಂಕರಿಯಲ್ಲಿ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.