ರಾಯಚೂರು: ‘ನನ್ನ ಅವಧಿಯಲ್ಲಿ ಲೋಪಗಳಾಗಿದ್ದರೆ, ಆಗ ಸಂಪುಟ ದರ್ಜೆ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ನಿದ್ರೆ ಮಾಡುತ್ತಿದ್ದರಾ’ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ, ಬಿಜೆಪಿ ನಾಯಕಿ ರತ್ನಪ್ರಭಾ ಕೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಹೇಳಿದ ಗಿಳಿಪಾಠ ಕೇಳಿಕೊಂಡು ರತ್ನಪ್ರಭಾ ಅವರು ಆರೋಪಗಳನ್ನು ಮಾಡಿದರೆ ಅವರ ಅವಧಿಯಲ್ಲಿನ ಲೋಪಗಳನ್ನು ಎತ್ತಿಹಿಡಿಯಬೇಕಾಗುತ್ತದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.
‘ಕೊಟ್ಟಜವಾಬ್ದಾರಿಯನ್ನು ಲೋಪವಿಲ್ಲದಂತೆ ಶಕ್ತಿಮೀರಿ ನಿರ್ವಹಿಸಿದ್ದೇನೆ. ಇನ್ನೂ ಬೇಕಾದರೆ ಪ್ರಿಯಾಂಕ್ ಖರ್ಗೆ ಲೋಪಗಳನ್ನು ತೋರಿಸಬಹುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.