ADVERTISEMENT

ಗಣರಾಜ್ಯೋತ್ಸವ ಪರೇಡ್‌–ಮೈಸೂರು ವಿದ್ಯಾರ್ಥಿನಿ ನೇತೃತ್ವ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:48 IST
Last Updated 25 ಜನವರಿ 2022, 19:48 IST
ಪ್ರಮೀಳಾ ಕುನ್ವರ್‌
ಪ್ರಮೀಳಾ ಕುನ್ವರ್‌   

ಮೈಸೂರು: ನಗರದ ಮಹಾರಾಣಿ ವಿಜ್ಞಾನ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್‌, ನವದೆಹಲಿಯ ರಾಜಪಥದಲ್ಲಿ ಬುಧವಾರ (ಜ.26) ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್‌ಸಿಸಿ ತಂಡದ ನೇತೃತ್ವ ವಹಿಸಲಿದ್ದಾರೆ.

ಪರೇಡ್‌ಗೆ ಆಯ್ಕೆಯಾಗಿರುವ ದೇಶದಎಲ್ಲಾ 17 ಎನ್‌ಸಿಸಿ ನಿರ್ದೇಶನಾಲಯ ಘಟಕಗಳ ಸೀನಿಯರ್‌ ವಿಂಗ್‌ ಕೆಡೆಟ್‌
ಗಳಿಗೆ ಕಮಾಂಡಿಂಗ್‌ ಲೀಡರ್‌ ಆಗಿಕಾರ್ಯನಿರ್ವಹಿಸಲಿದ್ದಾರೆ. ಅದಕ್ಕಾಗಿ ಬೆಂಗಳೂರು ಹಾಗೂ ನವದೆಹಲಿಯಲ್ಲಿ 3 ತಿಂಗಳಿಂದ ತರಬೇತಿ ಪಡೆದಿದ್ದಾರೆ.

ರಾಜಸ್ಥಾನ ಮೂಲದ ಪ್ರಮೀಳಾ ಅವರ ತಂದೆ ಪ್ರತಾಪ್‌ ಸಿಂಗ್‌, ನಗರದ ಕಾಳಿದಾಸ ರಸ್ತೆಯಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ.

ADVERTISEMENT

‘ಕಮಾಂಡರ್‌ ಆಗಿ ತಂಡ ಮುನ್ನಡೆಸಬೇಕು ಎಂಬುದು ಮಗಳ ಕನಸಾಗಿತ್ತು. ಆ ಗೌರವ ಒಲಿದಿದ್ದು, ಸತತ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಿರುವ ಮಗಳಿಗೆ ಶಹಬ್ಬಾಸ್‌ ಹೇಳಬೇಕು. ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ಕೆಡೆಟ್‌ಗಳ ತಂಡದ ನಾಯಕಿಯಾಗಿ ಕರ್ನಾಟಕ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಪ್ರತಾಪ್‌ ಸಿಂಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಮೀಳಾ ಸೇರಿದಂತೆ ಮೈಸೂರು ಗ್ರೂಪ್‌ನಿಂದ ಒಟ್ಟು 19 ಕೆಡೆಟ್‌ಗಳು ಪರೇಡ್‌ಗೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.