ADVERTISEMENT

‘ಬುದ್ಧನ ಬೆಳಕು’ ಕವನ ಸ್ಪರ್ಧೆ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 6 ಮೇ 2023, 17:51 IST
Last Updated 6 ಮೇ 2023, 17:51 IST
   

ಧಾರವಾಡ: ಗಣಕರಂಗ ಸಂಸ್ಥೆಯು 2566ನೇ ಬುದ್ಧ ಪೂರ್ಣಿಮೆ ಆಚರಣೆ ಅಂಗವಾಗಿ ಆಯೋಜಿಸಿದ್ದ ‘ಬುದ್ಧ ಬೆಳಕು’ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.

ಪ್ರಥಮ ಬಹುಮಾನ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಡಾ. ನೆಲ್ಲಿಕಟ್ಟೆ ಸಿದ್ಧೇಶ್‌ ಮತ್ತು ದಾವಣಗೆರೆಯ ಸದಾಶಿವ ಸೊರಟೂರ ಅವರಿಗೆ ಲಭಿಸಿದೆ. ದ್ವಿತೀಯ ಬಹುಮಾನ ತುಮಕೂರು ಜಿಲ್ಲೆಯ ಯರವರಹಳ್ಳಿಯ ಶ್ರೀಧರ ಜಿ. ಹಾಗೂ ತೃತೀಯ ಬಹುಮಾನ ಬೆಳಗಾವಿಯ ನಮಿತಾ ನಾಯಕ ಅವರಿಗೆ ಲಭಿಸಿದೆ. ತೀರ್ಪುಗಾರರ ಮೆಚ್ಚುಗೆ ಬಹುಮಾನ ಬೆಳಗಾವಿ ಜಿಲ್ಲೆಯ ನೇಸರಗಿಯ ಗಂಗಾದೇವಿ ಚಕ್ರಸಾಲಿ, ಚಿಕ್ಕಮಗಳೂರಿನ ಆರ್. ಗಿರೀಶ, ಹುಬ್ಬಳ್ಳಿಯ ಸುಭಾಷ ಚವ್ಹಾಣ್, ಬೀದರ್‌ ಜಿಲ್ಲೆಯ ಮಾಳೆಗಾಂವದ ಆರ್ಜಿತ್ ದಂಡಿನ, ಹೊಸಕೋಟೆಯ ಭಾವಜೀವಿ ಭಾರ್ಗವ ಪಡೆದುಕೊಂಡಿದ್ದಾರೆ. 

ವೈ.ಜಿ.ಭಗವತಿ ಮತ್ತು ಡಾ.ಎಚ್‌.ಕೆ.ಅಭಿಲಾಷಾ ಅವರು ತೀರ್ಪುಗಾರರಾಗಿದ್ದರು ಎಂದು ಸಂಸ್ಥೆಯ ಮುಖ್ಯಸ್ಥ ಸಿದ್ದರಾಮ ಹಿಪ್ಪರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.