ಹಳಿಯಾಳ (ಉತ್ತರ ಕನ್ನಡ ಜಿಲ್ಲೆ): ಕ್ರೀಡಾಪಟುಗಳಿಗೆ ವಿತರಿಸಲು ತಂದಿದ್ದ ಕ್ರೀಡಾ ಸಾಮಗ್ರಿಗಳನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ವೇದಿಕೆಯಿಂದಲೇ ಕ್ರೀಡಾಪಟುಗಳೆಡೆಗೆ ಎಸೆದ ವಿಡಿಯೊ ವೈರಲ್ ಆಗಿದೆ.
ಬುಧವಾರ ಇಲ್ಲಿ ನಡೆದ ನೂತನ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆಯ ವೇಳೆ ಕ್ರೀಡಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಪಟುಗಳು ವೇದಿಕೆಗೆ ಬರಲು ತಡವಾಯಿತು ಎಂದು ಕೋಪಗೊಂಡ ಸಚಿವರು, ಕೆಳಗೆ ನಿಂತಿದ್ದ ಅವರೆಡೆಗೆ ಕ್ರೀಡಾ ಸಾಮಗ್ರಿಗಳನ್ನು ಎಸೆದಿರುವ ದೃಶ್ಯ ವಿಡಿಯೊದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.