ADVERTISEMENT

30ರವರೆಗೆ ಸಿಐಡಿ ಕಸ್ಟಡಿಗೆ ಸ್ಯಾಂಟ್ರೊ ರವಿ, ಸಹಚರರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 21:47 IST
Last Updated 17 ಜನವರಿ 2023, 21:47 IST
ಪೊಲೀಸರ ವಶದಲ್ಲಿ ಸ್ಯಾಂಟ್ರೊ ರವಿ
ಪೊಲೀಸರ ವಶದಲ್ಲಿ ಸ್ಯಾಂಟ್ರೊ ರವಿ   

ಮೈಸೂರು: ಅತ್ಯಾಚಾರ, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಕೆ.ಎಸ್‌.ಮಂಜುನಾಥ ಅಲಿಯಾಸ್‌ ಸ್ಯಾಂಟ್ರೊ ರವಿ ಹಾಗೂ ಸಹಚರರಾದ ಪ್ರೇಮ್‌ಜಿ, ಶ್ರುತೇಶ್‌ ಅವರನ್ನು ಜ.30ರವರೆಗೆ ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ.

ಇಲ್ಲಿನ 6ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ಕೋರ್ಟ್ ಮಂಗಳವಾರ ಆದೇಶಿಸಿತು. ಆರೋಪಿಗಳನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು, ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಪಡೆದರು. ಈ ನಡುವೆ, ಸಂತ್ರಸ್ತೆಯು ಸೋಮವಾರ ರಾತ್ರಿ ಇಲ್ಲಿನ ದೇವರಾಜ ಠಾಣೆಗೆ ದೂರು ನೀಡಿದ್ದಾರೆ. ದೇವರಾಜ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ವಾಹನದಲ್ಲಿದ್ದ ಚೆಕ್‌ ಪುಸ್ತಕ ಕಳುವಾಗಿದೆ. ಆರೋಪಿ ರವಿ, ಸಹಚರ ಪ್ರಕಾಶ್‌ ಕಾರಣ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT