ADVERTISEMENT

ಮುಂದಿನ ಚುನಾವಣೆ ‌ನಂತರ ಹೊಸ ಮುಖ್ಯಮಂತ್ರಿ ಪ್ರಶ್ನೆ: ಸತೀಶ ಜಾರಕಿಹೊಳಿ

’ನಾಯಕ ಬೇರೆ ಮುಖ್ಯಮಂತ್ರಿ ಬೇರೆ, ಸಿದ್ದರಾಮಯ್ಯ ನಮ್ಮ ನಯಕರೂ ಹೌದು’

​ಪ್ರಜಾವಾಣಿ ವಾರ್ತೆ
Published 8 ಮೇ 2019, 10:13 IST
Last Updated 8 ಮೇ 2019, 10:13 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಹುಬ್ಬಳ್ಳಿ:ಹೊಸ ಮುಖ್ಯಮಂತ್ರಿ ‌ಪ್ರಶ್ನೆ ಏನಿದ್ದರೂ ಮುಂದಿನ ಚುನಾವಣೆಯ ನಂತರ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂಬ ಕಾಂಗ್ರೆಸ್‌ನ ಕೆಲ ಶಾಸಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನಮ್ಮ ನಾಯಕರೂ ಹೌದು. ನಾಯಕರು ಬೇರೆ ಮುಖ್ಯಮಂತ್ರಿ ಬೇರೆ. ಮುಖ್ಯಮಂತ್ರಿ ಪ್ರಶ್ನೆ ಈಗ ಉದ್ಭವಿಸದು. ಕಾಂಗ್ರೆಸ್ ಹೈಕಮಾಂಡ್ ಸಹಕಾರದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.

ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.