ADVERTISEMENT

‘ಗುಜರಾತಿಗಳಿಂದ ಕನ್ನಡಿಗರ ಕೆಎಂಎಫ್‌ ಉಳಿಸಿ’: ಎಚ್‌ಡಿಕೆಗೆ ಹಾರದ ಮೂಲಕ ಅಹವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2023, 14:37 IST
Last Updated 28 ಮಾರ್ಚ್ 2023, 14:37 IST
   

ಬೆಂಗಳೂರು: ಪಂಚರತ್ನ ಯಾತ್ರೆ ಕೈಗೊಂಡಿರುವ ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಯಶವಂತಪುರ ಕ್ಷೇತ್ರದಲ್ಲಿ ಮಂಗಳವಾರ ವಿಶೇಷವಾದ ಹಾರವೊಂದನ್ನು ಹಾಕಲಾಗಿದೆ. ಈ ಮೂಲಕ ‘ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌)’ಯನ್ನು ಉಳಿಸಬೇಕಾಗಿ ರೈತರು ಮಾಜಿ ಸಿಎಂಗೆ ಅಹವಾಲು ಸಲ್ಲಿಸಿದ್ದಾರೆ.

‘ಗುಜರಾತಿಗಳಿಂದ ಕನ್ನಡಿಗರ ಕೆಎಂಎಫ್‌ಅನ್ನು ಉಳಿಸಿ’ ಎಂಬ ಸಾಲು ಇದ್ದ ಬ್ಯಾನರ್‌ ಅನ್ನು, ಹಾಲು ಮೊಸರಿನ ಪ್ಯಾಕೆಟ್‌ಗಳಿಂದ ತಯಾರಿಸಲಾದ ಹಾರಕ್ಕೆ ಅಳವಡಿಸಿ, ಅದನ್ನು ಕುಮಾರಸ್ವಾಮಿ ಅವರಿಗೆ ಹಾಕಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ, ‘ನಂದಿನಿಯನ್ನು ರಕ್ಷಿಸಿ, ಕೆಎಂಎಫ್ ಕಾಪಾಡಿ... ಎನ್ನುವ ಕಾಳಜಿಯೊಂದಿಗೆ ವಿಶೇಷ ಹಾರ ತಯಾರಿಸಿ ನನಗೆ ಹಾಕಲಾಗಿದೆ. ನಮ್ಮ ನಾಡಿನ ರೈತರ ಜೀವನಾಡಿ ಆಗಿರುವ ನಂದಿನಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಮಾತು ಕೊಡುತ್ತೇನೆ’ ಎಂದು ಆಶ್ವಾಸನೆ ನೀಡಿದ್ದಾರೆ.

ADVERTISEMENT

ಕೆಎಂಎಫ್‌ ಮತ್ತು ಗುಜರಾತ್‌ನ ಅಮೂಲ್‌ ವಿಲೀನದ ಪ್ರಸ್ತಾವಗಳು, ನೇಮಕಾತಿಗೆ ಕೋರ್ಟ್‌ನಿಂದ ತಡೆ, ಮೊಸರಿನ ಪ್ಯಾಕೆಟ್‌ಗಳ ಮೇಲೆ ‘ದಹಿ’ ಎಂದು ಉಲ್ಲೇಖಿಸಿ ಕನ್ನಡ ಕಡೆಗಣಿಸಿದ ಕಾರಣಗಳಿಂದಾಗಿ ಕೆಎಂಎಫ್‌ ವಿವಾದಕ್ಕೆ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.