ತುಮಕೂರು: ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಮಂಗಳವಾರ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಬಂದ ಹಲವು ಸ್ವಾಮಿಗಳು ಸಹ ಮೊಬೈಲ್ ಮೂಲಕ ಅಗಲಿದ ಸ್ವಾಮೀಜಿಯ ಲಿಂಗ ಶರೀರದ ಜತೆಗೆ ಚಿತ್ರ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಕೆಲವು ಸ್ವಾಮೀಜಿಗಳು ವೇದಿಕೆ ಮೇಲಿದ್ದ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜಕೀಯ ಮುಖಂಡರ ಜತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನೋಟ ಕಂಡುಬಂತು.
ಮಧ್ಯಾಹ್ನ ದರ್ಶನಕ್ಕೆ ಬಂದ ಬಾಬಾ ರಾಮದೇವ್ ಮೊದಲು ಸಿದ್ಧಲಿಂಗ ಸ್ವಾಮೀಜಿ ಅವರ ಪಕ್ಕ ಆಸೀನರಾಗಿದ್ದರು. ಕೆಲವು ಕ್ಷಣಗಳ ಬಳಿಕ ಅಲ್ಲಿಗೆ ಬಂದ ಸುತ್ತೂರು ಸ್ವಾಮೀಜಿ, ರಾಮದೇವ್ ಅವರ ಪಕ್ಕದಲ್ಲಿ ಕುಳಿತುಕೊಂಡಿದ್ದರು.
‘ಸಿದ್ಧಲಿಂಗ ಸ್ವಾಮೀಜಿ ಅವರ ಪಕ್ಕ ನೀವೇ ಕುಳಿತುಕೊಳ್ಳಬೇಕು’ ಎಂದು ಸುತ್ತೂರು ಸ್ವಾಮೀಜಿಗೆ ಒತ್ತಾಯ ಮಾಡಿದ ರಾಮದೇವ್ ಅವರು, ತಾವು ಕುಳಿತಿದ್ದ ಕುರ್ಚಿಯನ್ನು ಸ್ವಾಮೀಜಿಗೆ ಬಿಟ್ಟುಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.