ADVERTISEMENT

ದೇವೇಗೌಡರಿಗೆ ಸಿದ್ದರಾಮಯ್ಯನೇ ದುಶ್ಮನ್: ಶ್ರೀನಿವಾಸಪ್ರಸಾದ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 20:13 IST
Last Updated 15 ಜುಲೈ 2019, 20:13 IST
   

ಮದ್ದೂರು: ‘‌ಸಮ್ಮಿಶ್ರ ಸರ್ಕಾರದ ಪ್ರಸ್ತುತ ಬಿಕ್ಕಟ್ಟಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೇ ಕಾರಣ. ಎಚ್‌.ಡಿ.ದೇವೇಗೌಡ ಅವರಿಗೆ ಸಿದ್ದರಾಮಯ್ಯ ಅವರೇ ದುಶ್ಮನ್’ ಎಂದು ಬಿಜೆಪಿ ಸಂಸದವಿ.ಶ್ರೀನಿವಾಸಪ್ರಸಾದ್ ಸೋಮವಾರ ಇಲ್ಲಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂದಿನ ಎಲ್ಲಾಬೆಳವಣಿಗೆಗಳಿಗೆ ದೋಸ್ತಿ ಸರ್ಕಾರದ ನಾಯಕರೇ ಕಾರಣರಾಗಿದ್ದಾರೆ. ಒಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೇ ಸರ್ಕಾರ ನಿಷ್ಕ್ರಿಯವಾಗಿದೆ. ಕಿತ್ತಾಟದಲ್ಲೇ ಕಾಲಕಳೆದಿದ್ದಾರೆ. ಸಚಿವ ರೇವಣ್ಣ ಅವರ ಸರ್ವಾಧಿಕಾರಿಧೋರಣೆಯೇ ಈ ಎಲ್ಲಾ ಅವ್ಯವಸ್ಥೆಗಳಿಗೆ ಕಾರಣವಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT