ADVERTISEMENT

ರಾಜೀನಾಮೆ ಕೊಡಲು ಹೋಗಲು ಹೇಳ್ರಿ: ಸಿಎಂ ವಿರುದ್ಧ ಸಿದ್ದರಾಮಯ್ಯ ಪರೋಕ್ಷ ಸಿಡಿ ಮಿಡಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 1:36 IST
Last Updated 23 ಜುಲೈ 2019, 1:36 IST
   

ಬೆಂಗಳೂರು: ‘ರಾಜೀನಾಮೆ ಕೊಡಲು ಹೋಗಲು ಹೇಳ್ರಿ’ ಎಂದು ಕಾಂಗ್ರೆಸ್ ಸಭಾನಾಯಕ ಸಿದ್ದರಾಮಯ್ಯ ತಮ್ಮ ಬಳಿ ಬಂದ ನಾಯಕರಿಗೆ ಸಿಟ್ಟಿನಿಂದ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ರಾತ್ರಿ 11.30ರ ಸುಮಾರಿಗೆ ಹೇಳಿದ್ದು ಮೈಕ್ರೋ ಫೋನ್‌ನಲ್ಲಿ ಕೇಳಿಸಿತು.

‘ಕಲಾಪ ಇಂದೇ ಮುಗಿಸಬೇಕೇ ನಾಳೆಗೆ ಮುಂದೂಡಲೇ,ನಿರ್ಣಯ ತಿಳಿಸಿ’ ಎಂದು ಸಭಾಧ್ಯಕ್ಷರು ಹೇಳಿದಾಗ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ ಆಸನದಲ್ಲಿ ಇರಲಿಲ್ಲ. ಈ ಬಗ್ಗೆ ಸಭಾಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲಿವರೆಗೂ ಸಿದ್ದರಾಮಯ್ಯ ಮೌನವಾಗಿಯೇ ಇದ್ದರು.

ADVERTISEMENT

ಆಗ ಸಿದ್ದರಾಮಯ್ಯ ಬಳಿ ಕೆಲವರು ಹೋದಾಗ ತಮ್ಮ ಸಿಟ್ಟು ಹೊರಹಾಕಿದರು.

ರಾಜೀನಾಮೆ ಕೊಟ್ಟು ಹೋಗಿ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಸಿಡಿ ಮಿಡಿ ಗೊಂಡಿದ್ದು ಕುಮಾರಸ್ವಾಮಿ ವಿರುದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.