ADVERTISEMENT

ಪೊಲೀಸ್‌ ಠಾಣೆಗೆ ನುಗ್ಗಿದ ಹಾವು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 17:24 IST
Last Updated 8 ನವೆಂಬರ್ 2018, 17:24 IST
ಶಿವಮೊಗ್ಗ ವಿದ್ಯಾನಗರದಲ್ಲಿರುವ ಪೂರ್ವ ಟ್ರಾಫಿಕ್‌ ಠಾಣೆಗೆ ಗುರುವಾರ ಪ್ರವೇಶಿಸಿದ್ದ ನಾಗರಹಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಸ್ನೇಕ್‌ ಕಿರಣ್.
ಶಿವಮೊಗ್ಗ ವಿದ್ಯಾನಗರದಲ್ಲಿರುವ ಪೂರ್ವ ಟ್ರಾಫಿಕ್‌ ಠಾಣೆಗೆ ಗುರುವಾರ ಪ್ರವೇಶಿಸಿದ್ದ ನಾಗರಹಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಸ್ನೇಕ್‌ ಕಿರಣ್.   

ಶಿವಮೊಗ್ಗ: ನಾಗರಹಾವೊಂದು ಗುರುವಾರ ಪೊಲೀಸ್‌ ಠಾಣೆಗೆ ನುಗ್ಗಿದ್ದರಿಂದ ಕೆಲ ಕಾಲ ಗೊಂದಲ ಸೃಷ್ಟಿಯಾಯಿತು.

ವಿದ್ಯಾನಗರದಲ್ಲಿರುವ ಪೂರ್ವ ಟ್ರಾಫಿಕ್‌ ಠಾಣೆಗೆ ಮಧ್ಯಾಹ್ನ ನಾಗರಹಾವು ನುಗ್ಗಿತು. ಠಾಣೆಯಲ್ಲೆಲ್ಲಾ ಹರಿದಾಡಿದ್ದೇ ಪೊಲೀಸರು ಬೆಚ್ಚಿ ಠಾಣೆಯಿಂದ ಹೊರ ಬಂದರು.

ಒಂದು ಗಂಟೆಯಾದರೂ ಹಾವು ಠಾಣೆಯಿಂದ ಹೊರಬರಲಿಲ್ಲ. ನಂತರ ಸ್ನೇಕ್‌ ಕಿರಣ್‌ಗೆ ಕರೆ ಮಾಡಲಾಯಿತು. ಅವರು ಹಾವು ಹಿಡಿದು, ಅರಣ್ಯಕ್ಕೆ ಬಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.