PHOTOS | ಕೆಆರ್ಎಸ್: ಕಾವೇರಿ ಪ್ರತಿಮೆ ಮಾರ್ಗದ 30 ಕಲ್ಲು ಕುಸಿತ
ತೆರಳುವ ಮಾರ್ಗದ ಕಲ್ಲುಗಳು ಭಾನುವಾರ ರಾತ್ರಿ ಕುಸಿದು ಬಿದ್ದಿವೆ. ಸತತ ಮಳೆ ಸುರಿಯುತ್ತಿರುವ ಕಾರಣ ಕಲ್ಲುಗಳು ಉರುಳಿದ್ದು ಜಲಾಶಯಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಪ್ರಜಾವಾಣಿ ವಾರ್ತೆ
Published 19 ಜುಲೈ 2021, 8:44 IST
Last Updated 19 ಜುಲೈ 2021, 8:44 IST
ಕೆಆರ್ಎಸ್: ಕಾವೇರಿ ಪ್ರತಿಮೆ ಮಾರ್ಗದ 30 ಕಲ್ಲು ಕುಸಿತ; ಜಲಾಶಯಕ್ಕೆ ತೊಂದರೆ ಇಲ್ಲ
ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ತೇವದ ವಾತಾವರಣವಿದ್ದು 30 ಕಲ್ಲುಗಳು ಕುಸಿದು ಬಿದ್ದಿವೆ.
ಸಂಸದೆ ಸುಮಲತಾ, ಕೆಆರ್ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಕಲ್ಲುಗಳು ಕುಸಿದಿರುವುದು ಆತಂಕ ಸೃಷ್ಟಿಸಿದೆ.
ಜಲಾಶಯದ ಆವರಣದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ವಾಹನಗಳ ಓಡಾಟ ಹೆಚ್ಚಾಗಿದೆ.
ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.