ತುಮಕೂರು: ಮಾಸಾಶನ ದೊರೆಯದಿದ್ದಕ್ಕೆ ಮನ ನೊಂದು ತಾಲ್ಲೂಕಿನ ಕೋರ ಹೋಬಳಿಯ ಲಿಂಗಯ್ಯನ ಪಾಳ್ಯದ ಅಂಗವಿಕಲ ಧರಣಿಂದ್ರ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಧರಣಿಂದ್ರ ಈ ಹಿಂದೆ ಮಾಸಾಶನ ಪಡೆಯುತ್ತಿದ್ದರು. ನವೀಕರಣದ ಸಮಯದಲ್ಲಿ ವಾರ್ಷಿಕ ₹ 15 ಸಾವಿರ ಆದಾಯ ಇದೆ ಎಂದು ಆದಾಯ ಪ್ರಮಾಣ ಪತ್ರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಮೂದಿಸಿದರು. ಇದರಿಂದ ಮಾಸಾಶನಕ್ಕೆ ತಡೆ ಬಿದ್ದಿತು. ಸಾಯುವ ಮುನ್ನ ಈ ಬಗ್ಗೆ ವಿಡಿಯೊ ಸಹ ಮಾಡಿದ್ದಾರೆ. ಅದರಲ್ಲಿ ತಹಶಿಲ್ದಾರರ್ ಪರಮೇಶ್ ಎಂಬುವವರು ಮಾಸಾಶನ ಬರುವುದಿಲ್ಲ ಎಂದಿರುವುದನ್ನು ಧರಣಿಂದ್ರ ಉಲ್ಲೇಖಿಸಿದ್ದಾರೆ.
ತನಿಖೆ: ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವಿಡಿಯೊದಲ್ಲಿ ಹೆಸರಿಸಿರುವ ಪರಮೇಶ್ಎಂಬುವವರು ನಮ್ಮಲ್ಲಿ ಕೇಸ್ ವರ್ಕರ್ ಇದ್ದಾರೆ. ತಪ್ಪು ಕಂಡು ಬಂದಲ್ಲಿ ಅಮಾನತುಗೊಳಿಸಲಾಗುವುದು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.