ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಐದು ವರ್ಷದ ಮಗುವಿಗೆ ಅವಶ್ಯವಾದ ಔಷಧಿಯನ್ನು ಪುಣೆಯಿಂದ ಗೂಡ್ಸ್ ರೈಲಿನಲ್ಲಿ ತರಿಸಿಕೊಡುವ ಮೂಲಕ ಪೋಷಕರಿಗೆ ಈಚೆಗೆ ನೆರವಾಗಿದ್ದಾರೆ.
ಪುಣೆಯ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿಗೆ ನಿಗದಿತ ಔಷಧಿ ಇಲ್ಲಿ ದೊರೆತಿರಲಿಲ್ಲ. ಪುಣೆಗೆ ಹೋಗಿ ವಾಹನದಲ್ಲಿ ಔಷಧಿ ತರುವುದಕ್ಕೆ ಪೋಷಕರಿಗೆ ಅವಕಾಶ ಆಗಿರಲಿಲ್ಲ. ತಮ್ಮ ಸಂಕಷ್ಟವನ್ನು ಅವರು ಸಚಿವರ ಗಮನಕ್ಕೆ ತಂದಿದ್ದರು.
ಸ್ಪಂದಿಸಿದ ಸಚಿವರು, ಪೋಷಕರಿಗೆ ಸಹಾಯ ಮಾಡುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಕಾರ್ಯಪ್ರವೃತ್ತರಾದ ಅಧಿಕಾರಿಗಳು ಅಲ್ಲಿ ಔಷಧಿ ಖರೀದಿಸಿ, ಗೂಡ್ಸ್ ರೈಲಿನಲ್ಲಿ ಬೆಳಗಾವಿಗೆ ಕಳುಹಿಸಿಕೊಟ್ಟಿದ್ದರು. ಇಲ್ಲಿನ ಸಿಬ್ಬಂದಿ, ಅದನ್ನು ಪೋಷಕರಿಗೆ ತಲುಪಿಸಿ ನೆರವಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.